Tuesday, April 8, 2014

ಹೀಗಿರಲಿ ನಾವು ಚುನಾಯಿಸುವ ಸರ್ಕಾರ

(ಪ್ರಕಟಿತ: ಪುಂಗವ 15/04/2014)


     ಮತದಾನ ಮಾಡುವ ಮೊದಲು ದೇಶದ ಆಡಳಿತ ಚುಕ್ಕಾಣಿ ಹಿಡಿಯುವ ಸರ್ಕಾರ ಹೇಗಿಬೇಕು? ಸರ್ಕಾರದ ಅದ್ಯತೆಗಳೇನಿರಬೇಕು? ಎಂದು ಯೋಚಿಸಿ ನಿರ್ಣಯಿಸುವುದು ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಹಿತದಲ್ಲಿ ನಾವು ಆಯ್ಕೆಮಾಡುವ ಸರ್ಕಾರ ಗಮನಿಸಬೇಕಾದ ಕೆಲವು ಪ್ರಮುಖ ಅಂಶಗಳನ್ನು ಈ ಕೆಳಗೆ ಪಟ್ಟಿಮಾಡಿದೆ ಪಟ್ಟಿಮಾಡಿದೆ.

  • ಹದಗೆಟ್ಟಿರುವ ಆಡಳಿತ ಯಂತ್ರವನ್ನು ಸುಧಾರಿಸುವುದು ಮತ್ತು ಸ್ಥಿರತೆ ಸರ್ಕಾರದ ಪ್ರಥಮ ಆದ್ಯತೆಯಾಗಲಿ. 
  • ವ್ಯಾಪಕವಾಗಿರುವ ಬ್ರಷ್ಟಾಚಾರ ನಿಗ್ರಹಿಸುವುದು, ಬ್ರಷ್ಟಾಚಾರದ ಪ್ರಕರಣಗಳ ತ್ವರಿತ ವಿಚಾರಣೆ ನಡೆಸಿ ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.
  • ಆಡಳಿತ ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತವಾಗಿರಬೇಕು. ಸರ್ಕಾರದ ಮಂತ್ರಿಗಳು ಮತ್ತು ಉನ್ನತ ಅಧಿಕಾರಿಗಳು ಸಂಶಯಾತೀತ ಪ್ರಾಮಾಣಿಕರಾಗಿರಲಿ.
  • ಕುಸಿಯುತ್ತಿರುವ ಆರ್ಥಿಕ ವ್ಯವಸ್ಥೆಯನ್ನು ಮೇಲೆತ್ತಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಹಣದುಬ್ಬರದ ಮೇಲೆ ನಿಯಂತ್ರಣ, ಯೋಜನೆಗಳ ತ್ವರಿತ ಅನುಷ್ಠಾನ, ವಿತ್ತೀಯ ಕೊರತೆಯನ್ನು ಕಡಿಮೆಗೊಳಿಸುವ ಪ್ರಯತ್ನ, ಅನಗತ್ಯ ಸಬ್ಸಿಡಿ ಮತ್ತು ಪುಕ್ಕಟೆ ಕೊಡುಗೆಗಳ ಯೋಜನೆಗಳಿಗೆ ಕಡಿವಾಣ, ಉತ್ಪಾದನೆಯನ್ನು ಹೆಚ್ಚಿಸುವ ಮಾರ್ಗಗಳು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರೋತ್ಸಾಹ ಮಂತಾದವುಗಳು ಸರ್ಕಾರದ ಪ್ರಾಥಮಿಕ ಆದ್ಯತೆಗಳಾಗಲಿ.
  • ಮಿತಿಮೀರಿ ಏರುಪೇರಾಗುತ್ತಿರುವ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸಲಿ. ಜೊತೆಗೆ ಕೃಷಿ ಉತ್ಪನ್ನಗಳಿಗೆ ಸ್ಥಿರ ಮತ್ತು ಯೋಗ್ಯ ಬೆಲೆ ದೊರಕುವಂತಹ ನೀತಿಗಳನ್ನು ರೂಪಿಸಲಿ.
  • ಆಹಾರೋತ್ಪಾದನೆ, ಇಂಧನ, ವಿದ್ಯುತ್, ಸಂಪರ್ಕ, ಸೇನಾ-ಸುರಕ್ಷೆಯ ಶಸ್ತ್ರ ಸಲಕರಣೆಗಳ ಉತ್ಪಾದನೆಗಳಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ಸಹಕಾರಿಯಾಗುವ ನೀತಿಗಳನ್ನು ರೂಪಿಸಬೇಕು.
  • ಭಾರತ ದೇಶದ ವಿಶಿಷ್ಟ ಗ್ರಾಮಜೀವನ ಸದೃಢಗೊಳ್ಳಬೇಕು. ಗ್ರಾಮೀಣಪ್ರದೇಶಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಕೃಷಿ, ಹೈನುಗಾರಿಕೆ, ಗೋಸಂರಕ್ಷಣೆ, ಗುಡಿಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವುದರ ಮೂಲಕ ಹಳ್ಳಿಗಳಿಂದ ನಗರಗಳತ್ತ ಯುವಕರು ವಲಸೆ ಹೋಗುವುದನ್ನು ತಡೆಯಬೇಕು.
  • ದೇಶವನ್ನು ಕ್ಯಾನ್ಸರ್‍ನಂತೆ ಕಾಡುತ್ತಿರುವ ಜೆಹಾದಿ, ಮಾವೋವಾದಿ, ನಕ್ಸಲ್ ಮುಂತಾದ ಭಯೋತ್ಪಾದನೆಗಳನ್ನು ಮಟ್ಟ ಹಾಕುವ ದಿಟ್ಟತನವನ್ನು ತೋರಬೇಕು.
  • ಅಲ್ಲಸಂಖ್ಯಾತ ತುಷ್ಟೀಕರಣ, ಮತಬ್ಯಾಂಕ್ ರಾಜಕಾರಣ ಕೊನೆಗೊಳ್ಳಲಿ. ಸಮಾಜದ ಎಲ್ಲ ವರ್ಗಗಳನ್ನು ಸಮಾನವಾಗಿ ಕಂಡು ಸಾಮಾಜಿಕ ಸಾಮರಸ್ಯ ಬೆಳೆಸುವುದು ಸರ್ಕಾರದ ಕರ್ತವ್ಯವಾಗಬೇಕು. 
  • ಮತಾಂತರ, ಲವ್ ಜೆಹಾದ್, ಲ್ಯಾಂಡ್ ಜಿಹಾದ್ ಮೊದಲಾದ ಸಮಾಜಘಾತುಕ ಚಟುವಟಿಕೆಗಳನ್ನು ಕೊನೆಗೊಳಿಸಲಿ.
  • ದೇಶದ ಭೂ ಮತ್ತು ಜಲ ಗಡಿಗಳು ಸುರಕ್ಷಿತವಾಗಿರಬೇಕು. ಆಂತರಿಕ ಮತ್ತು ಗಡಿ ಸುರಕ್ಷೆ ಸರ್ಕಾರದ ಪ್ರಮುಖ ಜವಾಬ್ದಾರಿಯಾಗಬೇಕು. ಜಮ್ಮು-ಕಾಶ್ಮೀರದಂತಹ ಸಮಸ್ಯೆಗಳು, ಅಸ್ಸಾಂನ ಬಾಂಗ್ಲಾ ನುಸುಳುಕೋರರ ತಂಟೆಗಳು ಮೊದಲಾದವುಗಳನ್ನು ಕೊನೆಗೊಳಿಸುವ ಹೊಣೆಗಾರಿಕೆಯನ್ನು ಅರ್ಹರೀತಿಯಲ್ಲಿ ನಿರ್ವಹಿಸಬೇಕು.
  • ಆಗಾಗ ಗಡಿ ಉಲ್ಲಂಘಿಸುತ್ತಿರುವ ಚೀನಾ, ಗಡಿಯಾಚೆಯಿಂದ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ, ಅಕ್ರಮ ನುಸುಳುಕೋರರಿಂದಾಗಿ ತಲೆನೋವಾಗಿರುವ ಬಾಂಗ್ಲಾದೇಶ ಮುಂತಾದ ನೆರೆಯ ಶತ್ರುದೇಶಗಳಿಗೆ ತಕ್ಕ ಉತ್ತರ ನೀಡುವ ಎದೆಗಾರಿಕೆಯನ್ನು ಪ್ರದರ್ಶಿಸಲಿ.
  • ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಗೌರವವನ್ನು ಎತ್ತಿಹಿಡಿಯಲಿ. ವಿವಿಧ ದೇಶದಗಳೊಂದಿಗೆ ದ್ವಿಪಕ್ಷೀಯ ಸಂಭಂಧಗಳನ್ನು ಉತ್ತಮಗೊಳಿಸುವುದರ ಜೊತೆಗೆ, ಏಷ್ಯಾ, ಆಫ್ರಿಕ ಮತ್ತು ದಕ್ಷಿಣ ಅಮೇರಿಕಗಳ ಅಭಿವೃದ್ಧಿಶೀಲ ದೇಶಗಳಿಗೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ನೇತೃತ್ವ ಒದಗಿಸಲು ಭಾರತ ಸಕ್ಷಮವಾಗಲಿ.
  • ಸಶಸ್ತ್ರ ಸೇನೆ, ಗಡಿಕಾಯುವ ಸೈನಿಕ ದಳ, ಆಡಳಿತ ಮತ್ತು ಪೋಲೀಸ್ ವ್ಯವಸ್ಥೆಯ ಪ್ರಾಮಾಣಿಕ ಅಧಿಕಾರಿಗಳು, ದೇಶದ ಹಿತ ಬಯಸುವ ಹಾಗೂ ದೇಶದ ಒಳಿತಿಗಾಗಿ ಕಾರ್ಯಮಾಡುವ ಸಜ್ಜನರು ಮತ್ತು ಸಂಘ-ಸಂಸ್ಥೆಗಳ ನೈತಿಕ ಸ್ಥರ್ಯವನ್ನು ಹೆಚ್ಚಿಸಲಿ.
  • ಭಾರತೀಯ ಸಂಸ್ಕøತಿ ಪರಂಪರೆಗಳಲ್ಲಿ ನಂಬಿಕೆ ಉಳ್ಳ ಸರ್ಕಾರ ಅಸ್ತಿತ್ವಕ್ಕೆ ಬರಲಿ. ನಮ್ಮ ಪ್ರಾಚೀನ ಸಂಪ್ರದಾಯಗಳನ್ನು ಗೌರವಿಸುವ, ಇಲ್ಲಿನ ಆಚರಣೆಗಳು, ಕಲೆ-ಸಾಹಿತ್ಯ, ಭಾಷೆ, ಸ್ಮಾರಕಗಳನ್ನು ಸಂರಕ್ಷಿಸುವಲ್ಲಿ ಸರ್ಕಾರ ಕ್ರಮಗಳನ್ನು ಕೈಗೊಳ್ಳಲಿ. 
  • ಎಲ್ಲಕ್ಕಿಂತ ಮಿಗಿಲಾಗಿ ದೇಶದಲ್ಲಿ ಜನರಲ್ಲಿ ದೇಶಪ್ರೇಮ, ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಮೂಡಿಸಬಲ್ಲ ಸಮರ್ಥ ನೇತೃತ್ವ ಭಾರತಕ್ಕೆ ದೊರಕಲಿ.

            ದಶಕದ ದುರಾಡಳಿತದಿಂದ ಬೇಸತ್ತ ಭಾರತದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ದೇಶದ ಭವಿಷ್ಯವನ್ನು ಆಯ್ಕೆ ಮಾಡಬೇಕಾಗಿರುವ ಈ ಸಂಧರ್ಭದಲ್ಲಿ ಪ್ರಜ್ಞಾವಂತ ಮತದಾರ ಓರ್ವ ಸಮರ್ಥ, ದಕ್ಷ ಮತ್ತು ಅದಮ್ಯ ದೇಶಪ್ರೇಮವುಳ್ಳ ನೇತೃತ್ವದ ಸರ್ಕಾರವನ್ನು ಚುನಾಯಿಸಬಲ್ಲನೇ? ಕಾದು ನೋಡಬೇಕು. 

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...