Friday, November 11, 2016

ಆಂತರಿಕ ಭದ್ರತೆಗೆ ಜಿಹಾದಿಗಳ ಸವಾಲು

(ಪುಂಗವ  15/11/2016)

ರಾಜಕೀಯ ಹಿಂಸಾಚಾರಕ್ಕೆ ಮತೀಯ ಉಗ್ರವಾದದ ನಂಟು  -  ರಾಜ್ಯದಲ್ಲಿ ನಡೆದಿದೆ ಆರೆಸ್ಸೆಸ್ ಕಾರ್ಯಕರ್ತರ ಸರಣಿ ಕೊಲೆಗಳು

ರಾಜ್ಯದಲ್ಲಿ ಕಳೆದ ಇಪ್ಪತ್ತೊಂದು ತಿಂಗಳುಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮತ್ತು ಪರಿವಾರ ಸಂಘಟನೆಗಳಿಗೆ ಸೇರಿದ ಎಂಟು ಮಂದಿಯ ಹತ್ಯೆಯಾಗಿದೆ. 2015ರ ಫೆಬ್ರುವರಿ 19ರಂದು ಶಿವಮೊಗ್ಗದಲ್ಲಿ ಚೂರಿ ಇರತಕ್ಕೆ ಬಲಿಯಾದ ವಿಶ್ವನಾಥ, 2015 ನವಂಬರ 10ರಂದು ಟಿಪ್ಪು ಜಯಂತಿ ಮೆರವಣಿಗೆಯ ದೊಂಬಿಯಲ್ಲಿ ಹಲ್ಲೆಗೀಡಾಗಿ ಮೃತರಾದ ಕೊಡಗಿನ ವಿಶ್ವ ಹಿಂದೂ ಪರಿಷತ್ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪ, 2016ರ ಅಕ್ಟೋಬರ್ 16ರಂದು ವಿಜದಶಮಿಯ ಪಥಸಂಚಲ ಮುಗಿಸಿ ಮನೆಗೆ ಹೊರಟಿದ್ದಾಗ ಸಂಘದ ಗಣವೇಶದಲ್ಲೇ ಕೊಲೆಯಾದ ಬೆಂಗಳೂರಿನ ಶಿವಾಜಿನಗರದ ರುದ್ರೇಶ್ ಇವರೆಲ್ಲರ ಕೊಲೆಯ ಸಂಚಿನ ಹಿಂದೆ ಪ್ರಮುಖವಾಗಿ ಒಂದೇ ಸಂಘಟನೆಯ ಹೆಸರು ಕೇಳಿ ಬರುತ್ತಿದೆ.. ಮೂಡುಬಿದಿರೆಯ ಬಜರಂಗದಳ ಕಾರ್ಯಕರ್ತ ಪ್ರಶಾಂತ ಪೂಜಾರಿ, ಮೈಸೂರಿನ ಉದಯಗಿರಿ ಬಡಾವಣೆಯಲ್ಲಿ ಹತ್ಯೆಗೀಡಾದ ಬಿಜೆಪಿಯ ಕ್ಯಾತಮಾರನಹಳ್ಳಿ ರಾಜು, ಕುಶಾಲನಗರದ ಪ್ರವೀಣ ಪೂಜಾರಿ, ಮಂಗಳೂರಿನ ಆರೆಸ್ಸೆಸ್ ಕಾರ್ಯಕರ್ತ ಕಾರ್ತಿಕ ರಾಜ್, ಮೈಸೂರಿನ ಬಿಜೆಪಿ ಮುಖಂಡ ಮಾಗಳಿ ರವಿ ಇವರುಗಳ ಹತ್ಯೆಯ ಹಿಂದೆಯೂ ಒಂದೇ ಸಂಘಟನೆಗೆ ಸೇರಿದ ಜನರ ಹೆಸರು ಬಲವಾಗಿ ಕೇಳಿಬರುತ್ತಿದೆ. ಅಲ್ಲದೇ ಹಲವಾರು ಬಾರಿ ಸಂಘದ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆದಿವೆ. ಬೆಂಗಳೂರಿನ ರುದ್ರೇಶ್ ಹತ್ಯೆಯಲ್ಲಿ ಬಂಧಿತರಾದ ನಾಲ್ವರು ಪ್ರಮುಖ ಆರೋಪಿಗಳಾದ ವಾಸೀಂ ಅಹ್ಮದ್, ಮುಜೀಬ್, ಮೊಹಮದ್ ಮಜರ್ ಮತ್ತು ಇರ್ಫಾನ್ ಪಾಷಾ ವಿಚಾರಣಾ ಸಂದರ್ಭದಲ್ಲಿ ಪೋಲೀಸರಿಗೆ ನೀಡಿದ ಮಾಹಿತಿಯಿಂದ ಸಂಘಪರಿವಾರದ ಕಾರ್ಯಕರ್ತರ ಹತ್ಯೆಯ ವ್ಯವಸ್ಥಿತ ಸಂಚು ಮತ್ತು ಇವೆಲ್ಲದರೊಡನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಅಥವಾ ಪಿಎಫ್‌ಐ ಹೆಸರಿನ ಈ ಸಂಘಟನಯೊಂದಿಗಿನ ನಂಟು ದೃಢಗೊಂಡಿದೆ. ರುದ್ರೇಶ್ ಹತ್ಯೆಯನ್ನು ಕಾರ್ಯಗತಗೊಳಿಸಿದ ಈ ನಾಲ್ವರು ಪಿಎಫ್‌ಐ ಮತ್ತು ಎಸ್‌ಡಿಪಿಐನ ಸದಸ್ಯರಾಗಿದ್ದಲ್ಲದೇ ಇವರಿಗೆ ಸೂಚನೆ ನೀಡಿದ ಪಿಎಫ್‌ಐ ಸಂಘಟನೆಯ ಬೆಂಗಳೂರು ಜಿಲ್ಲಾಧ್ಯಕ್ಷ ಅಸೀಂ ಷರೀಫ್ ಕೂಡ ಬಂಧನಕ್ಕೊಳಗಾಗಿದ್ದಾನೆ. ಈ ಹಿಂದೆ ಮೂಡುಬಿದಿರೆಯ ಪ್ರಶಾಂತ ಪೂಜಾರಿ ಹತ್ಯೆಯಲ್ಲಿ ಬಂಧಿತರಾದ ಏಳು ಜನ ಪಿಎಫ್‌ಐ ಸದಸ್ಯರಾಗಿದ್ದರು, ಅವರಲ್ಲೊಬ್ಬ ವಲಯ ಅಧ್ಯಕ್ಷನೂ ಸೇರಿದ್ದ. ಕುಟ್ಟಪ್ಪ ಹತ್ಯೆ, ರಾಜು ಹತ್ಯೆಯ ಆರೋಪಿಗಳಿಗೂ, ಅನೇಕ ಬಾರಿ ಸಂಘದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದವರಿಗೂ ಪಿಎಫ್‌ಐ ನಂಟಿದ್ದಿದು ಸಾಬೀತಾಗಿದೆ. ಹಾಗೆಯೇ ಈ ಎಲ್ಲ ಕೊಲೆಗಳಲ್ಲೂ ಒಂದು ರೀತಿ ಸಾಮ್ಯತೆ ಕಾಣುತ್ತದೆ.

ರುದ್ರೇಶ್ ಕೊಲೆ ಪ್ರಕರಣದಲ್ಲಿ ಬಂಧಿತರಾದ ನಾಲ್ವರು ನೀಡಿದ ಮಾಹಿತಿಗಳು ಇನ್ನೂ ಬೆಚ್ಚಿ ಬೀಳಿಸುವಂತವು. ತನಿಖೆ ನಡೆಸುತ್ತಿರುವ ಪೋಲೀಸರೇ ಹೇಳುವಂತೆ ಹತ್ಯೆಗೂ ಮೊದಲು ಅವರು ಉಗ್ರ ಸಂಘಟನೆಯಿಂದ ತರಬೇತಿ ಪಡೆದಿದ್ದರು. ಅವರ ಮನೆಯವರೇ ಪೋಲೀಸರಿಗೆ ನೀಡಿದ ಮಾಹಿತಿಯಂತೆ ಆಗಾಗ ಕೆಲವು ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕೇರಳ ಮತ್ತು ಆಂಧ್ರ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಹಾಗೆಯೇ ರುದ್ರೇಶ್ ಜೊತೆಗೆ ಇನ್ನೋರ್ವ ಆರೆಸ್ಸೆಸ್ ಕಾರ್ಯಕರ್ತನನ್ನು ಕೊಲೆ ಮಾಡಿ ಸಂಘದ ಕಾರ್ಯಕರ್ತರಲ್ಲಿ ಭಯವನ್ನು ಹುಟ್ಟಿಸಲು ಬಯಸಿದ್ದರು ಎನ್ನುವ ಮಾಹಿತಿಯನ್ನು ಅವರು ನೀಡಿದ್ದಾರೆ. ಜೊತೆಗೆ ಮೈಸೂರಿನ ಸಂಸದ ಪ್ರತಾಪ ಸಿಂಹ ಸೇರಿದಂತೆ ಇನ್ನು ಕೆಲವು ಮುಖಂಡರನ್ನು ಕೊಲ್ಲಲು ಸಂಚು ನಡೆದಿತ್ತು ಎನ್ನುವ ವರದಿಗಳೂ ಬಂದಿವೆ. ಇವುಗಳಿಂದ ಸಂಘ ಪರಿವಾರಗಳಿಗೆ ಸೇರಿದ ಕಾರ್ಯಕರ್ತರ ಕೊಲೆ ಮತ್ತು ಹಲ್ಲೆಗಳ ಹಿಂದೆ ಸಂಘವನ್ನು ಬೆದರಿಸುವ ಒಂದು ವ್ಯವಸ್ಥಿತ ಸಂಚು ನಡೆದಿದ್ದು ಸ್ಪಷ್ಟ. ಜೊತೆಗೆ ಈ ಹಿಂಸೆಯ ಹಿಂದೆ ರಾಜಕೀಯ ಕುತಂತ್ರವೂ ಅಡಗಿದ್ದು ಪಿಎಫ್‌ಐನ ರಾಜಕೀಯ ಅಂಗವಾದ ಸೊಷಯಲಿಸ್ಟ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯ (ಎಸ್‌ಡಿಪಿಐ) ವನ್ನು ಮುಸ್ಲಿಮರ ಪಕ್ಷವಾಗಿ ದಕ್ಷಿಣ ಭಾರತದಲ್ಲಿ ನೆಲೆಗೊಳಿಸುವ ಹುನ್ನಾರವೂ ಅಡಗಿದೆ. 

ಟಿಪ್ಪು ಜಯಂತಿ ಆಚರಣೆಯ ವಿರೋಧದಲ್ಲಿ ವ್ಯಾಪಕ ಜನಬೆಂಬಲ ವ್ಯಕ್ತವಾಗುತ್ತಿದ್ದು ಸಂಘ ಅದರ ಮುಂಚೂಣಿಯಲ್ಲಿರುವುದೂ ಇತ್ತೀಚಿಗೆ ಸಂಘರಿವಾರದ ಕಾರ್ಯಕರ್ತರ ಮೇಲೆ ಹಿಂಸಾಚಾರ ಹೆಚ್ಚಾಗಲು ಇನ್ನೊಂದು ಕಾರಣ. ಇದೇ ನವೆಂಬರ ೪ರಂದು ಮೈಸೂರಿನ ಪಿರಿಯಾಪಟ್ಟಣದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಸಂಭಂಧಿಸಿದ ಶಾಂತಿ ಸಭೆಯಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗಲೇ ಮಾಗಳಿ ರವಿ ಸಂಶಯಾಸ್ಪದ ರೀತಿಯಲ್ಲಿ ಮರಣ ಹೊಂದಿದರು, ಸನ್ನಿವೇಶವನ್ನು ನೋಡಿದರೆ ಇದು ವ್ಯವಸ್ಥಿತ ಕೊಲೆ ಎನ್ನುವುದು ಗೋಚರವಾಗುತ್ತದೆ. ಟಿಪ್ಪು ಜಯಂತಿ ಆಚರಣೆ ಮುಸ್ಲಿಂ ಮತಗಳನ್ನು ಸೆಳೆಯುವ ರಾಜಕೀಯ ಲಾಭಕ್ಕಾಗಿ ದುರುದ್ಧೇಶದಿಂದ ಕೂಡಿದ್ದು ಎನ್ನುವುದು ಸ್ಪಷ್ಟ. ಕ್ರೂರಿ ಮತಾಂಧ ಟಿಪ್ಪುವಿನ ಐತಿಹಾಸಿಕ ನಿಜಸ್ವರೂಪವನ್ನು ಬಯಲು ಮಾಡಿದ್ದಲ್ಲದೆ ಆತನ ಜಯಂತಿ ಆಚರಣೆಯ ಹಿಂದಿನ ರಾಜಕೀಯ ದುರದ್ಧೇಶದ ವಿರುದ್ಧ ಪ್ರಬಲವಾದ ಜನಾಭಿಪ್ರಾಯವು ರೂಪುಗೊಂಡಿದ್ದು ಅವರನ್ನು ಕೆರಳಿಸಿದೆ. ದುರದೃಷ್ಟದ ಸಂಗತಿಯೆಂದರೆ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರ ಇಂತಹ ಸಮಾಜಘಾತುಕ ಶಕ್ತಿಗಳ ರಕ್ಷಣೆಗೆ ನಿಂತಿರುವಂತೆ ಕಾಣುತ್ತಿದೆ. ಪ್ರತಿಯೊಂದು ಬಾರಿ ಸಂಘಪರಿವಾರದ ಕಾರ್ಯಕರ್ತರ ಕೊಲೆಯಾದಾಗಲೂ ವೈಯಕ್ತಿಕ ದ್ವೇಷದಿಂದ ಕೊಲೆ, ಅಪಘಾತದಿಂದ ಸಾವು ಇತ್ಯಾದಿ ವಾದಗಳನ್ನು ತೇಲಿಬಿಟ್ಟು ತನಿಖೆಯ ದಾರಿತಪ್ಪಿಸುವ ಕೆಲಸವನ್ನು ಮಾಡಲಾಗುತ್ತಿದೆ. ಹತ್ಯೆಗೀಡಾದವರಿಗೆ ಮಸಿ ಬಳಿಯುವ ಪ್ರಯತ್ನವನ್ನೂ ಮಾಡಲಾಗುತ್ತಿದೆ.

ಪಿಎಫ್‌ಐನಂತಹ ಉಗ್ರವಾದಿ ಸಂಘಟನೆಯ ರಕ್ಷಣೆ ಅಥವಾ ಮತೀಯ ಮೂಲಭೂತವಾದವನ್ನು ಪೋಷಿಸುವ ನೀತಿಯಿಂದ ಮುಸ್ಲಿಂ ಮತಗಳ ಧ್ರುವೀಕರಣದಿಂದ ರಾಜಕೀಯ ಲಾಭವಾಗಬಹುದೆಂದು ಕಾಂಗ್ರೆಸ್ ಮತ್ತಿತರ ತಥಾಕಥಿತ ಸೆಕ್ಯುಲರ್ ಪಕ್ಷಗಳು ಭಾವಿಸಬಹುದು. ಆದರೆ ಇಂತಹ ನೀತಿಯು ಸಮಾಜಘಾತುಕ ದೇಶವಿರೋಧಿ ಎನ್ನುವ ಎಚ್ಚರಿಕೆ ಇರಬೇಕು. ಹಾಗೆಯೇ ಇಂತಹ ಹಿಂಸಾಚಾರ ವಿರೋಧಗಳಿಂದ ಸಂಘ ಇನ್ನಷ್ಟು ಬಲಗೊಳ್ಳುವುದೇ ವಿನಹ ಎಂದಿಗೂ ಬೆದರಿಸಲಾರವು. ಏಕೆಂದರೆ ಸಂಘ ಸಮಾಜ ಸಂಘಟನೆ ಮತ್ತು ರಾಷ್ಟ್ರೀಯ ಮುನರುತ್ಥಾನದ ಉನ್ನತ ಧ್ಯೇಯಕ್ಕಾಗಿ ಕಾರ್ಯ ಮಾಡುತ್ತಿದೆಯೇ ಹೊರತು, ಯಾವುದೇ ರಾಜಕೀಯ ಅಧಿಕಾರದ ಆಕಾಂಕ್ಷೆಗಳಿಗಲ್ಲ.


ಏನಿದು ಪಿಎಫ್‌ಐ?
ಕೇರಳದಲ್ಲಿ ಮೂಲವನ್ನು ಹೊಂದಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಥವಾ ಪಿಎಫ್‌ಐ ೨೦೦೬ರಲ್ಲಿ ಪ್ರಾರಂಭಗೊಂಡ ಒಂದು ಮುಸ್ಲಿಂ ಮೂಲಭೂತವಾದಿ ಸಂಘಟನೆಯಾಗಿದೆ. ನಿಷೇಧಿತ ಉಗ್ರ ಸಂಘಟನೆ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ ಇಂಡಿಯಾ- ಸಿಮಿಯ ಹೊಸ ರೂಪ ಎಂದೇ ಹೇಳಬಹುದಾದ ಪಿಎಫ್‌ಐನ ಮುಖಂಡರು ಬಹುತೇಕ ಸಿಮಿಯ ಕಾರ್ಯಕರ್ತರೇ ಆಗಿದ್ದಾರೆ. ಉದಾಹರಣೆಹೆ ಪಿಎಫ್‌ಐನ ಸಂಸ್ಥಾಪಕರಲ್ಲೊಬ್ಬ ಅಬ್ದುಲ್ ರೆಹಮಾನ್ ಸಿಮಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ, ಕೇರಳದ ಸೆಕ್ರೆಟರಿ ಅಬ್ದುಲ್ ಹಮೀದ್ ಮಾಸ್ಟರ್ ಸಿಮಿಯ ಕೇರಳ ಸೆಕ್ರೆಟರಿಯಾಗಿದ್ದ.  ಈ ಸಂಘಟನೆ ಆರಂಭವಾದಾಗಿನಿಂದಲೂ ಒಂದಿಲ್ಲೊಂದು ಸಮಾಜಘಾತುಕ ಮತ್ತು ದೇಶವಿರೋಧಿ ಕಾರ್ಯಗಳಿಗಾಗಿ ಸದಾ ಸುದ್ದಿಯಲ್ಲಿದೆ. ಕಿಡ್ನಾಪ್, ಕೊಲೆ, ಬೆದರಿಕೆ ಹಾಕುವುದು, ಗಲಭೆ ಹುಟ್ಟಿಸುವುದು, ದ್ವೇಷದ ಹರಡುವುದು ಮೊದಲಾದವುಗಳಿಂದ ಹಿಡಿದು ಮತೀಯ ಮೂಲಭೂತವಾದ, ಲವ್ ಜಿಹಾದ್, ಇಸ್ಲಾಂ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಭಂಧ ಇವೆ ಎನ್ನುವವರೆಗೆ ಅನೇಕ ಆರೋಪಗಳು ಪಿಎಫ್‌ಐ ಮೇಲೆ ನಿರಂತರ ಕೇಳಿ ಬಂದಿವೆ. ನ್ಯಾಶನಲ್ ಡೆವೆಲೊಪ್‌ಮೆಂಟ್ ಫ್ರಂಟ್(ಎನ್‌ಡಿಎಫ್), ಕರ್ನಾಟಕ ಫೋರಮ್ ಫಾರ್ ಡಿಗ್ನಿಟಿ(ಕೆಎಫ್‌ಡಿ), ಮನಿತ ನೀತಿ ಪಸರೈ(ಎಮ್‌ಎನ್‌ಪಿ) ಮೊದಲಾದ ಸಂಘಟನೆಗಳು ಪಿಎಫ್‌ಐನಲ್ಲಿ ವಿಲೀನಗೊಂಡು ದಕ್ಷಿಣ ಭಾರತದ ರಾಜ್ಯಗಳಿಗೆ ಪಿಎಫ್‌ಐ ಹರಡಿಕೊಂಡಿದೆ. ನ್ಯಾಶನಲ್ ವುಮನ್ಸ್ ಫ್ರಂಟ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮೊದಲಾದ ವಿವಿಧ ಮೋರ್ಚಾಗಳ ಮೂಲಕ ತನ್ನ ಜಾಲವನ್ನು ವಿಸ್ತರಿಸಿದ್ದು ೮೦ ಸಾವಿರಕ್ಕು ಹೆಚ್ಚು ಸದಸ್ಯತ್ವ ಇದೆ ಎಂದು ಹೇಳಿಕೊಳ್ಳುತ್ತದೆ. ಸಮಾನತೆಯ ಸಮಾಜ ಸ್ಥಾಪನೆಗಾಗಿ ಹೋರಾಡುವ ಸಾಮಾಜಿಕ ಸಂಘಟನೆ ಎಂದು ಹೇಳಿಕೊಳ್ಳುವ ಈ ಸಂಘಟನೆಯ ಸದಸ್ಯರೆಲ್ಲರೂ ಮುಸ್ಲಿಮರೇ. ಸೋಷಯಲಿಸ್ಟ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಅಥವಾ ಎಸ್‌ಡಿಪಿಐ ಪಿಎಫ್‌ಐ ಹುಟ್ಟುಹಾಕಿದ ರಾಜಕೀಯ ಪಕ್ಷವಾಗಿದ್ದು ಆಸ್ಸಾಮಿನ ಬದ್ರುದ್ದೀನ ಅಜ್ಮಲ್‌ನ ಏಐಯುಡಿಎಫ್ ಮತ್ತು ಹೈದರಾಬಾದಿನ ಓವೈಸಿಯ ಎಮ್‌ಐಎಮ್ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ಮುಸಲ್ಮಾನರ ಪಕ್ಷವಾಗಿ ನೆಲೆಗೊಳ್ಳಲು ಪ್ರಯತ್ನಿಸುತ್ತಿದೆ. 

ಏಪ್ರಿಲ್ 2013ರಲ್ಲಿ ಕೇರಳದ ಕಣ್ಣೂರಿನ ನಾರತ್‌ನಲ್ಲಿ ಪಿಎಫ್‌ಐ ತರಬೇತಿ ಕೇಂದ್ರದಲ್ಲಿ ಪೋಲಿಸರು ದಾಳಿ ಮಾಡಿದಾಗ ನಾಡಬಾಂಬುಗಳು, ಮಚ್ಚು ಮೊದಲಾದ ಆಯುಧಗಳು, ಬಾಂಬ್ ತಯಾರಿಕಾ ಕಚ್ಚಾವಸ್ತುಗಳು ದೊರೆತವು, 21 ಪಿಎಫ್‌ಐ ಕಾರ್ಯಕರ್ತರು ಬಂಧಿತರಾದರು. 2011ರಲ್ಲಿ ಮೈಸೂರಿನಲ್ಲಿ ಇಬ್ಬರು ಹುಡುಗರನ್ನು ಅಪಹರಿಸಿದ ಕೆಎಫ್‌ಡಿಯ ಕಾರ್ಯಕರ್ತರು ಸಂಘಟನೆಯ ಫಂಡಿಗಾಗಿ ೫ಕೋಟಿ ಒತ್ತೆ ಹಣದ ಬೇಡಿಕೆ ಇಟ್ಟಿದ್ದರು. ಆ ಇಬ್ಬರೂ ಹುಡುಗರನ್ನು ಸಾಯಿಸಲಾಯಿತು. 2012ರಲ್ಲಿ ಕೇರಳ ಸರ್ಕಾರ ಉಚ್ಛ ನ್ಯಾಯಾಲಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಪಿಎಫ್‌ಐ ಆರೆಸ್ಸೆಸ್ ಮತ್ತು ಸಿಪಿಐ(ಎಮ್)ನ ಕಾರ್ಯಕರ್ತರ ಕೊಲೆಯ ೨೭ ಪ್ರಕರಣಗಳಲ್ಲಿ ಪಿಎಫ್‌ಐ ಕೈವಾಡ ಇದೆ ಎಂದು ಹೇಳಿದೆ. ೨೦೧೨ರಲ್ಲಿ ಪುನಾ, ಚೆನ್ನೈ, ಹೈದರಾಬಾದ ದೆಹಲಿಗಳಿಂದ ಲಕ್ಷಾಂತರ ಎಸ್‌ಎಮ್‌ಎಸ್‌ಗಳನ್ನು ಕಳುಹಿಸಿ ಇತರ ನಗರಗಳಲ್ಲಿ ನೆಲೆಸಿರುವ ಪೂರ್ವೋತ್ತರ ರಾಜ್ಯದ ಜನರನ್ನು ಬೆದರಿಸುವ ಪ್ರಚಾರಕಾರ್ಯದ ಹಿಂದೆ ಪಿಎಫ್‌ಐನ ಅಂಗ ಸಂಸ್ಥೆಗಳಾದ ಕೆಎಫ್‌ಡಿ, ಎಮ್‌ಎನ್‌ಪಿಗಳಿದ್ದವು. ಇವುಗಳಲ್ಲಿ ಕೆಲವು ಎಸ್‌ಎಮ್‌ಎಸ್‌ಗಳು ಪಾಕಿಸ್ತಾನದಿಂದಲೂ ಕಳುಹಿಸಲ್ಪಟ್ಟಿದ್ದವು. ಇತ್ತೀಚಿನ  ಪಿಎಫ್‌ಐಗೆ ಸೇರಿದ ಕೆಲವು ಉಗ್ರರು ಐಎಸ್‌ಐಎಸ್‌ನ್ನು ಸೇರಿದ್ದು ವರದಿಯಾಗಿವೆ.

Wednesday, November 2, 2016

ಜಮ್ಮು ಮತ್ತು ಕಾಶ್ಮೀರ : ಎಂದೋ ಬಗೆಹರಿದ ಕಥೆ

(ವಿಶ್ವವಾಣಿ  26/10/2016)

ಅಕ್ಟೋಬರ್ 26 ಜಮ್ಮು ಕಾಶ್ಮೀರ ಭಾರತದಲ್ಲಿ ವಿಲೀನಗೊಂಡ ದಿವಸ, ತನ್ನಿಮಿತ್ತ ರಾಜ್ಯದ ವಿಲೀನವನ್ನು ವಿಶ್ಲೇಷಿಸುವ ಈ ಲೇಖನ.
1947ರ ಭಾರತದ ಸ್ವಾತಂತ್ರ್ಯ ಸಂದರ್ಭದಲ್ಲಿ ಬ್ರಿಟಿಷರ ನೇರ ಆಡಳಿತಕ್ಕೊಳಪಟ್ಟ ಬ್ರಿಟಿಷ್ ಇಂಡಿಯ ಮತ್ತು ಬ್ರಿಟಿಷರ ಸಾರ್ವಭೌಮತೆಯ ಅಡಿಗೆ ರಾಜರುಗಳ ಆಡಳಿತಕ್ಕೊಳಪಟ್ಟ ಪ್ರದೇಶ ಹೀಗೆ ಎರಡು ಭಾಗಗಳಾಗಿತ್ತು. ಭಾರತ ಸ್ವಾತಂತ್ರ್ಯ ಅಧಿನಿಯಮ 1947ರಂತೆ ಭಾರತ ಬ್ರಿಟಿಷರ ಆಡಳಿತದಿಂದ ಮುಕ್ತವಾದಮೇಲೆ ರಾಜರ ಆಡಳಿತವಿದ್ದ ಪ್ರದೇಶಗಳ ಮೇಲೆಯೂ ಬ್ರಿಟಿಷರ ಸಾರ್ವಭೌಮತೆ ಕೊನೆಗೊಂಡಿತು. ಹಾಗೆಯೇ ದೇಶದ ವಿಭಜನೆಯು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಭೂಭಾಗಕ್ಕೆ ಮಾತ್ರ ಅನ್ವಯವಾಗಿತ್ತು. ರಾಜಾಡಳಿತ  ಸಂಸ್ಥಾನಗಳು ಮತ್ತು ಬ್ರಿಟಿಷ್ ಅಧಿಪತ್ಯದ ಸಂಬಂಧ ಬ್ರಿಟಿಷ್ ಸಾರ್ವಭೌಮತೆಯ ಸೂತ್ರ ಮತ್ತು ಅನೇಕ ಒಪ್ಪಂದಗಳಿಂದ ನಿಯಂತ್ರಣಕ್ಕೊಳಪಟ್ಟಿದ್ದವು, ಆದ್ದರಿಂದ ಬ್ರಿಟಿಷ್ ಸಾರ್ವಭೌಮತೆ ಕೊನೆಯಾಗುವುದರೊಂದಿಗೆ ಈ ಒಪ್ಪಂದಗಳು ಕೊನೆಗೊಂಡವು. ಹೊಸ ಆಡಳಿತದೊಂದಿಗೆ ಈ ಒಪ್ಪಂದಗಳು ಮುಂದುವರಿಯುವಂತಿರಲಿಲ್ಲ. ಬ್ರಿಟಿಷ್ ಸಾರ್ವಭೌಮತೆ ಕೊನೆಯಾಗುವುದೆಂದರೆ ರಾಜಾಡಳಿತ ರಾಜ್ಯಗಳ ಮೇಲೆ ಬ್ರಿಟಿಷ್ ಅಧಿಪತ್ಯಕ್ಕೆ ಇದ್ದ ಅಧಿಕಾರಗಳೆಲ್ಲವೂ ಪುನಃ ರಾಜ್ಯಕ್ಕೆ ಮರಳಿ ಅವು ಸ್ವತಂತ್ರಗೊಂಡವು. ಜೊತೆಗೆ ಭಾರತ ಮತ್ತು ಪಾಕಿಸ್ತಾನ ಡೊಮಿನಿಯನ್‌ಗಳೆಂಬ ಎರಡು ಹೊಸ ವ್ಯವಸ್ಥೆಗಳೊಡನೆ ಮಾತುಕತೆ ನಡೆಸಲು ಅವು ಮುಕ್ತವಾಗಿದ್ದವು. ರಾಜಾಡಳಿತ ಪ್ರಾಂತಗಳು ಸ್ವತಂತ್ರವಾಗಿ ಉಳಿಯುವುದು ಎಂದರೆ ಸನಾತನ ಕಾಲದಿಂದ ಒಂದು ರಾಷ್ಟ್ರವಾಗಿದ್ದ ಭಾರದ ಏಕತೆ ಭಂಗವಾದಂತೆ. ಮತ್ತು ಎರಡು ಶತಮಾನಗಳ ಬ್ರಿಟಿಷ ಆಡಳಿತದ ಸಮಯದಲ್ಲಿ ವ್ಯಾಪಾರ, ವ್ಯವಹಾರ ಅಭಿವೃದ್ಧಿ, ಸಂಪರ್ಕ ಸಾಧನಗಳು, ರೈಲು, ಬಂದರು, ನೀರಾವರಿ ವ್ಯವಸ್ಥೆ ಮೊದಲಾದ ಹಲವು ವಿಷಯಗಳಲ್ಲಿ ಬ್ರಿಟಿಷ್ ಆಡಳಿತ ಮತ್ತು ರಾಜ್ಯಗಳ ನಡುವೆ ಅನೇಕ ಒಪ್ಪಂದಗಳ ಸಂಕೀರ್ಣ ವ್ಯವಸ್ಥೆ ರೂಪುಗೊಂಡಿತ್ತು. ಆದ್ದರಿಂದ ಐದುನೂರ ಐವತ್ತಕ್ಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಸಣ್ಣಪುಟ್ಟ ರಾಜ್ಯಗಳು ಭಾರತ ಅಥವಾ ಪಾಕಿಸ್ತಾನ ಒಕ್ಕೂಟವನ್ನು ಸೇರದೆ ಸ್ವತಂತ್ರವಾಗಿ ಆಳ್ವಿಕೆ ನಡೆಸುವುದು ಅಸಾಧ್ಯವಾಗಿತ್ತು. ಆದ್ದರಿಂದ ಭೌಗೋಳಿಕ ನಿರಂತರತೆಯನ್ನು ಗಮನದಲ್ಲಿಟ್ಟುಕೊಂಡು ತಿದ್ದುಪಡಿಗೊಂಡ ಭಾರತ ಸರ್ಕಾರ ಅಧಿನಿಯಮ 1935 ಅನ್ವಯವಾಗುವಂತೆ ಭಾರತ ಅಥವಾ ಪಾಕಿಸ್ತಾನ ಒಕ್ಕೂಟವನ್ನು ಸೇರುವಂತೆ ಸಂಸ್ಥಾನಗಳಿಗೆ ಸಲಹೆ ನೀಡಲಾಯಿತು. ಭಾರತ ಸ್ವಾತಂತ್ರ ಅಧಿನಿಯಮ 1947ರಲ್ಲಿ ಯಾವುದೇ ಸಂಸ್ಥಾನವು ಸ್ವತಂತ್ರವಾಗಿರುವ ಆಯ್ಕೆ ಇರಲಿಲ್ಲ.
ಈ ಹಿನ್ನೆಲೆಯಲ್ಲಿ ರಾಜಾಡಳಿತ ಸಂಸ್ಥಾನಳೊಂದಿಗೆ ಭಾರತದ ರಾಜತಾಂತ್ರಿಕ ಸಂಭಂಧವನ್ನು ನಿರ್ಧರಿಸುವ ಸಲುವಾಗಿ ಅಂದಿನ ಗೃಹ ಮಂತ್ರಿ ಸರ್ದಾರ ಪಟೆಲ್ ಮತ್ತು ಕಾರ್ಯದರ್ಶಿ ವಿ ಪಿ ಮೆನನ್ ಎರಡು ಕರಾರು ಪತ್ರಗಳನ್ನು ತಯಾರಿಸಿದರು. ಮೊದಲನೆಯದು ಬ್ರಿಟಿಷ್ ಸಾರ್ವಭೌಮತೆ ಮತ್ತು ಸಂಸ್ಥಾನಗಳ ನಡುವೆ ಇದ್ದ ಆಡಳಿತ ವ್ಯವಸ್ಥೆಗಳು ಹೊಸದಾಗಿ ಸ್ಥಾಪನೆಗೊಂಡ ಭಾರತ ಡೊಮಿನಿಂiನ್ನಿನೊಡನೆ ಮುಂದುವರಿಯುತ್ತವೆ ಎನ್ನುವ ಸ್ಥಾಯಿ ಒಪ್ಪಂದ. ಎರಡನೆಯದು ರಾಜನು ತನ್ನ ರಾಜ್ಯವನ್ನು ಭಾರತದೊಂದಿಗೆ ವಿಲೀನಗೊಳಿಸುವ ವಿಲಯನ ಒಪ್ಪಂದ. ಈ ವಿಲಯನ ಒಪ್ಪಂದದ ಅಡಿಯಲ್ಲೇ ಮೈಸೂರು, ಟ್ರಾವಾಂಕೂರ್, ಪಟಿಯಾಲ, ಗ್ವಾಲಿಯರ್ ಮೊದಲಾದ ದೊಡ್ಡ ಪ್ರಾಂತಗಳೂ ಸೇರಿದಂತೆ ಇತರ ಐದುನೂರ ಐವತ್ತಕ್ಕೂ ಹೆಚ್ಚು ಸಣ್ಣಪುಟ್ಟ ರಾಜ್ಯಗಳು ಭಾರತ ಒಕ್ಕೂಟದಲ್ಲಿ ಸೇರ್ಪಡೆಯಾದವು. ಇದೇ ವಿಲಯನ ಒಪ್ಪಂದಕ್ಕೆ ತಮ್ಮ ಸಾರ್ವಭೌಮ ಅಧಿಕಾರವನ್ನು ಬಳಸಿ ಸಹಿ ಹಾಕುವ ಮೂಲ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮಹಾರಾಜ ಹರಿಸಿಂಗ್ ತನ್ನ ರಾಜ್ಯವನ್ನು ಅಕ್ಟೋಬರ್ 26 1947ರಂದು ಭಾರತದಲ್ಲಿ ವಿಲೀನಗೊಳಿಸಿದರು.

ಜಮ್ಮು ಕಾಶ್ಮೀರ ನರೇಶ ಹಾಗೂ ಟಿಬೇಟ್ ಆದಿ ದೇಶಾಧಿಪತಿ ಎಂದು ಬಿರುದಿದ್ದ ಮಹಾರಾಜ ಹರಿಸಿಂಗ್ ಆಡಳಿತಕ್ಕೊಳಪಟ್ಟ ಕ್ಷೇತ್ರ 1947ರಲ್ಲಿ ಸುಮಾರು 2ಲಕ್ಷ 22ಸಾವಿರ ಚದರ ಕಿಮೀ. ಸುಮಾರು ಶೇ 76ರಷ್ಟು ಮುಸಲ್ಮಾನ ಜನಸಂಖ್ಯೆಯಿದ್ದ ಈ ಪ್ರಾಂತ ಪಾಕಿಸ್ತಾನ, ಅಪಘಾನಿಸ್ತಾನ, ತಜಕಿಸ್ತಾನ, ಟಿಬೇಟ್, ಚೀನ ಈ ಐದು ದೇಶಗಳೊಡನೆ ತನ್ನ ಗಡಿಯನ್ನು ಹಂಚಿಕೊಂಡಿತ್ತು. ಅತ್ಯಂತ ಆಯಕಟ್ಟಿನ ಪ್ರದೇಶವಾಗಿದ್ದ ಈ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪಾಕಿಸ್ತಾನ ಬಯಸಿತ್ತು ಹಾಗೂ ಮಹಾರಾಜ ಹರಿಸಿಂಗರನ್ನು ಬಗ್ಗಿಸುವ ಎಲ್ಲ ಪ್ರಯತ್ನಗಳನ್ನು ಮಹಮ್ಮದ್ ಅಲಿ ಜಿನ್ನಾ ಮಾಡಿದ್ದರು. ಎಲ್ಲ ಪ್ರಯತ್ನಗಳು ಫಲ ನೀಡದಿದ್ದಾಗ ಅಕ್ಟೋಬರ ೨೨ರಂದು ರಾಜ್ಯದ ಮೇಲೆ ಆಕ್ರಮಣ ಮಾಡಿದ ಪಾಕಿಸ್ತಾನ ಬಲಪೂರ್ವಕವಾಗಿ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಯಿತು. ಈ ಸಂದರ್ಭದಲ್ಲಿ ರಾಜ್ಯದ ರಕ್ಷಣೆಗಾಗಿ ಭಾರತೀಯ ಸೇನೆಯ ಸಹಾಯ ಬಯಸಿದ ಮಹಾರಾಜ ಹರಿಸಿಂಗ್ ವಿಲಯನ ಒಪ್ಪಂದಕ್ಕೆ ಸಹಿ ಹಾಕಿದರು. ಅಕ್ಟೋಬರ್ 27 1947ರಂದು ಭಾರತದ ಗವರ್ನರ್ ಜನರಲ್ ಮೌಂಟಬ್ಯಾಟನ್ ಅಂಕಿತದೊಂದಿಗೆ ಜಮ್ಮು ಕಾಶ್ಮೀರ ರಾಜ್ಯ ಭಾರತದಲ್ಲಿ ಸೇರ್ಪಡೆಯಾಯಿತು.

ಜಮ್ಮು ಕಾಶ್ಮೀರದ ಪ್ರತ್ಯೇಕತೆ ವಿಶೇಷ ಸ್ಥಾನಮಾನಗಳನ್ನು ಪ್ರತಿಪಾದಿಸುವವರು, ರಾಜ್ಯದ ವಿಲೀನವನ್ನೇ ಪ್ರಶ್ನಿಸುವವರು ಕೆಲವು ವಿಷಯಗಳನ್ನು ಗಮನಿಸಬೇಕು. ಉಳಿದ ರಾಜ್ಯಗಳ ವಿಲೀನದ ಮಾದರಿಯಲ್ಲೇ ಜಮ್ಮು ಕಾಶ್ಮೀರ ರಾಜ್ಯವೂ ಕೂಡ ಭಾರತ ಒಕ್ಕೂಟದಲ್ಲಿ ಸೇರ್ಪಡೆಯಾಯಿತು. ಮೈಸೂರು, ಟ್ರಾವಾಂಕೂರ, ಗ್ವಾಲಿಯರ್ ಮೊದಲಾದ ಸಂಸ್ಥಾನಗಳ ರಾಜರು ಅಂಕಿತ ಹಾಕಿದ ಯಾವುದೇ ಷರತ್ತಿಗೆ ಒಳಪಟ್ಟಿರದ ವಿಲಯನ ಒಪ್ಪಂದಕ್ಕೇ ಮಹಾರಾಜ ಹರಿಸಿಂಗ್ ಸಹಿ ಹಾಕಿದರು. ಈ ವಿಲೀನ ಒಪ್ಪಂದದ ಒಂದನೇ ವಿಧಿಯಲ್ಲ್ಲಿ ಭಾರತ ಅಧಿಪತ್ಯದ ಶಾಸಕಾಂಗ, ಒಕ್ಕೂಟದ ನ್ಯಾಯಾಂಗ ಮತ್ತು ಅಧಿಪತ್ಯದ ಉದ್ಧೇಶಗಳಿಗಾಗಿ ಸ್ಥಾಪಿತವಾಗುವ ಯಾವುದೇ ಅಧಿಕರಣಗಳಿರುವ ಭಾರತದ ಅಧಿಪತ್ಯಕ್ಕೆ ಸೇರಿಕೊಳ್ಳುವುದನ್ನು ಮತ್ತು ಸಂಭಂಧಿಸಿದ ಷರತ್ತುಗಳಿಗೆ ಅನುಗುಣವಾಗಿರಲು ಅಂಗೀಕರಿಸಿದ್ದೇನೆ. 9ನೇ ವಿಧಿಯಲ್ಲಿ ಹೇಳಿರುವಂತೆ ಈ ಒಪ್ಪಂದವನ್ನು ರಾಜ್ಯದ ಪರವಾಗಿ ಜಾರಿಗೊಳಿಸುವುದಾಗಿ ಮತ್ತು ಈ ಒಪ್ಪಂದದಲ್ಲಿನ ಉಲ್ಲೇಖ ನನ್ನನ್ನು ಅಥವಾ ರಾಜ್ಯದ ಆಡಳಿತಗಾರರನ್ನು ಮತ್ತು ನಂತರದ ವಾರಸುದಾರರಿಗೂ ಅನ್ವಯವಾಗುದು ಎಂದು ಜಾಹೀರುಪಡಿಸುತೇನೆ. ಎಂದು ಹೇಳಿದೆ.

ತನ್ನ ರಾಜ್ಯವನ್ನು ಸೇರ್ಪಡೆಗೊಳಿಸುವಲ್ಲಿ ಹರಿಸಿಂಗ್ ವಿಳಂಬ ಮಾಡಿದರು, ಅವರು ಜಮ್ಮು ಕಾಶ್ಮೀರವನ್ನು ಸ್ವತಂತ್ರವಾಗಿರಿಸ ಬಯಸಿದ್ದರು ಎಂದು ಆರೋಪ ಮಾಡಲಾಗುತ್ತದೆ. ಆದರೆ ವಾಸ್ತವದಲ್ಲಿ ಭಾರತದ ಸ್ವಾತಂತ್ರವನ್ನು ಪ್ರಬಲವಾಗಿ ಪ್ರತಿಪಾದಿಸುವವರಲ್ಲಿ ಹರಿಸಿಂಗ್ ಮುಂಚೂಣಿಯಲ್ಲಿದ್ದರು. 1947ರ ಜುಲೈ 18ರಂದು ಸರ್ದಾರ್ ಪಟೇಲರಿಗೆ ಬರೆದ ಪತ್ರದಲ್ಲಿ ಹರಿಸಿಂಗ್ ಭಾರತ ಒಕ್ಕೂಟವನ್ನು ಸೇರಲು ಉತ್ಸುಕರಾಗಿದ್ದರು ಎನ್ನುವ ಅಂಶ ಸ್ಪಷ್ಟವಾಗಿದೆ. ಆದರೆ ಪ್ರಥಮ ಪ್ರಧಾನಿ ನೆಹರು ಜಮ್ಮು ಕಾಶ್ಮೀರದ ಆಡಳಿತವನ್ನು ಶೇಖ್ ಅಬ್ದುಲ್ಲರಿಗೆ ಹಸ್ತಾಂತರಿಸಬೇಕೆಂಬ ಷರತ್ತು ಹಾಕಿದ್ದರು! ವಿಲೀನದ ನಂತರ ರಾಜ್ಯದ ಮಧ್ಯಂತರ ಆಡಳಿತ ಚುಕ್ಕಾಣಿಯನ್ನು ಶೇಖ್‌ಗೆ ಕೊಡಿಸುವಲ್ಲಿ ಯಶಸ್ವಿಯೂ ಆದರು. ನಂತರದ ಕಾಲಘಟ್ಟದಲ್ಲಿ ಜಮ್ಮು ಕಾಶ್ಮೀರ ರಾಜ್ಯಕ್ಕೆ ಸಂಭಂಧಿಸಿದಂತೆ ನೆಹರು-ಶೇಖ್, ಇಂದಿರಾ-ಶೇಖ್, ರಾಜೀವ್-ಪಾರೂಕ್ ಮುಂತಾದ ಒಪ್ಪಂದಗಳು ನಡೆದವು. ಶೇಖ್ ಮತ್ತವರು ಕುಟುಂಬದ ಮೇಲೆ ನೆಹರು-ಗಾಂಧಿ ಪರಿವಾರಕ್ಕಿದ್ದ ವ್ಯಾಮೋಹ ಇನ್ನೂ ನಿಗೂಢವಾಗಿದೆ. 

1951ರಲ್ಲಿ ರಾಜ್ಯದಲ್ಲಿ ಸಂವಿಧಾನ ಸಭೆ ರಚನೆಯಾಯಿತು. ಇದರ ಎಲ್ಲ 75 ಸದಸ್ಯರೂ ಶೇಖ್ ನೇತೃತ್ವದ ನ್ಯಾಶನಲ್ ಕಾನ್ಫರೆನ್ಸ್‌ಗೆ ಸೇರಿದವರಾಗಿದ್ದರು. ಇದೇ ಶಾಸನ ಸಭೆಯು 1954ರ ಫೆಬ್ರುವರಿ 6ರಂದು ಭಾರತದಲ್ಲಿ ಜಮ್ಮು ಕಾಶ್ಮೀರದ ವಿಲೀನವನ್ನು ಊರ್ಜಿಗೊಳಿಸಿತು.  ಇದೇ ಶಾಸನ ಸಭೆಯು ರಾಜ್ಯದ ಸಂವಿಧಾನವನ್ನು ರಚಿಸಿತು. ಜಮ್ಮು ಕಾಶ್ಮೀರ ರಾಜ್ಯದ ಸಂವಿಧಾನದ ಪ್ರಿಯಾಂಬಲ್ ಮತ್ತು ಮೂರನೇ ವಿಧಿಯಲ್ಲಿ ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂದು ಹೇಳಲಾಗಿದೆ. ಹಾಗೆಯೇ ವಿಧಿ ೪ರಲ್ಲಿ ರಾಜ್ಯದ ಭೌಗೋಳಿಕ ವಿಸ್ತಾರವು 17 ಆಗಸ್ಟ 1947ರಂದು ಇರುವಂತೆ ರಾಜರ ಆಳ್ವಿಕೆಗೆ ಸೇರಿದ ಪ್ರದೇಶ ಎಂದು ಹೇಳಲಾಗಿದೆ. ಅಂದರೆ ಇದರಲ್ಲಿ ಜಮ್ಮು, ಕಾಶ್ಮೀರ, ಪಾಕ್ ಆಕ್ರಮಿತ ಪ್ರದೇಶ, ಗಿಲ್ಗಿಟ್-ಬಾಲ್ಟಿಸ್ತಾನ, ಚೀನಾ ಆಕ್ರಮಿಸಿಕೊಂಡಿರುವ ಭೂಭಾಗವೂ ಸೇರಿದ ಲಢಾಕ್ ಈ ಎಲ್ಲ ಭಾಗಗಳೂ ಸೇರುತ್ತವೆ. ೫ನೇ ವಿಧಿಯು ರಾಜ್ಯಕ್ಕೆ ಸಂಭಂಧಿಸಿ ವಿಷಯಗಳಲ್ಲಿ ಸಂಸತ್ತಿಗೆ ಕಾನೂನು ರೂಪಿಸುವ ಅಧಿಕಾರವನ್ನು ನೀಡುತ್ತದೆ. ೧೪೭ನೇ ವಿದಿಯು ೩ನೇ ಮತ್ತು ೫ನೇ ವಿಧಿಯ ತಿದ್ದುಪಡಿಯನ್ನು ನಿಷೇಧಿಸಿದೆ. ಇದರಿಂದ ರಾಜ್ಯದ ಸಂವಿಧಾನ ಸಭೆಯ ಇಚ್ಛೆಯಂತೆ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಭಾರತದ ಸಾರ್ವಭೌಮತೆಯ ಅಂಗೀಕಾರ ಮತ್ತು ಇದನ್ನು ಅಪರಿವರ್ತನೀಯ ಎನ್ನುವ ಅಂಶ ಸ್ಪಷ್ಟವಾಗುತ್ತದೆ. ಭಾರತದ ಸಂಸತ್ತು ಅನೇಕ ಬಾರಿ ಜಮ್ಮು ಕಾಶ್ಮೀರದ ಮೇಲೆ ಭಾರತದ ಸಾರ್ವಭೌಮತೆಯನ್ನು ಎತ್ತಿ ಹಿಡಿದದ್ದಲ್ಲದೇ 1962 ಮತ್ತು 1994ರ ಠರಾವಿನಲ್ಲಿ ಸಂಪೂರ್ಣ ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎನ್ನುವ ನಿರ್ಣಯವನ್ನು ಅಂಗೀಕರಿಸಿದೆ. 

ಇವೆಲ್ಲವುಗಳ ಜೊತೆಗೆ ರಾಜ್ಯದ ವಿಲೀನವನ್ನು ಪ್ರಶ್ನಿಸಿ ಜನಮತಗಣನೆ ನಡೆಸಬೇಕೆಂದು ವಿಶ್ವಸಂಸ್ಥೆಯ ನಿರ್ಣಯವನ್ನು ಉಲ್ಲೇಖಿಸುವವರು ಒಂದರೆಡು ಅಂಶಗಳನ್ನು ಗಮನಿಸುವುದು ಒಳಿತು. ಪಾಕ್ ಆಕ್ರಮಣದ ನಂತರ ಯುದ್ಧವಿರಾಮದ ಮಧ್ಯಸ್ಥಿಕೆವಹಿಸಿದ ವಿಶ್ವಸಂಸ್ಥೆಯ ರಕ್ಷಣಾ ಪರಿಷತ್ತು ತನ್ನ 47ನೇ ನಿರ್ಣಯದಲ್ಲಿ ರಾಜ್ಯದಲ್ಲಿ ಜನಮತಗಣನೆಯನ್ನು ನಡೆಸುವ ಮೊದಲು ಪಾಕಿಸ್ತಾನವು ತನ್ನ ಸೇನೆಯನ್ನು ಹಿಂತೆಗೆಯಬೇಕು ಮತ್ತು ಕಾನೂನು ಸುವ್ಯವಸ್ಥೆಗೆ ಬೇಕಾಗುವಷ್ಟು ಬಲವನ್ನು ಭಾರತ ನಿಯೋಜನೆಗೊಳಿಸಬೇಕು ಎಂದು ಹೇಳಿದೆ. ಆದರೆ ಆಜಾದ್ ಕಾಶ್ಮೀರ ಎಂದು ಕರೆಯುವ ಆಕ್ರಮಿತ ಪ್ರದೇಶದಿಂದ ಪಾಕ್ ಸೇನೆ ಇನ್ನೂ ಹೊರಹೋಗಿಲ್ಲ. ಪಾಕಿಸ್ತಾನ ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶವನ್ನು ತನ್ನ ಒಂದು ಪ್ರಾಂತವನ್ನಾಗಿ ಮಾಡಿಕೊಂಡಿದೆ. ಅಲ್ಲದೇ ಕಳೆದ ಆರೂವರೆ ದಶಕಗಳಲ್ಲಿ ರಾಜ್ಯದ ವ್ಯವಸ್ಥಿತವಾಗಿ ಜನಸಂಖ್ಯೆಯಲ್ಲಿ ಏರುಪೇರು ಮಾಡಲಾಗಿದೆ. ಹಾಗೆಯೇ ಇದುವರೆಗೆ ನಡೆದ ಚುನಾವಣೆಗಳಲ್ಲಿ ಪ್ರತ್ಯೇಕತಾವಾದಿಗಳ ಬಹಿಷ್ಕಾರದ ನಡುವೆಯೂ ಹೆಚ್ಚು ಪ್ರಮಾಣದ ಮತದಾನ ನಡೆಯುತ್ತಿದೆ. 2014ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 76 ಪ್ರತಿಶತ ಮತದಾನವಾಗಿದ್ದು ಇದಕ್ಕೇ ಸಾಕ್ಷಿ. ಇವುಗಳನ್ನು ಗಮನಿಸಿದಾಗ ಜನಮತಗಣನೆಯ ಕೂಗಿನ ಹಿಂದಿನ ಪೊಳ್ಳುತನ ಅರಿವಾಗುತ್ತದೆ.

ಯಾವ ದೃಷ್ಟಿಯಿಂದ ನೋಡಿದರೂ ಭಾರತದಲ್ಲಿ ಜಮ್ಮು ಕಾಶ್ಮೀರ ರಾಜ್ಯದ ಸಂಪೂರ್ಣ ವಿಲೀನ ಪ್ರಶ್ನಾತೀತ ಮತ್ತು ಅಪರಿವರ್ತನೀಯ. ಈ ವಿಷಯವನ್ನಿಟ್ಟುಕೊಂಡು ತಮ್ಮ ರಾಜಕೀಯ ಲಾಭವನ್ನು ಸಾಧಿಸುವವರು ದೇಶದ ಏಕತೆಗೆ ಭಂಗ ತರುವುದಷ್ಟೇ ಅಲ್ಲ ಕಾಶ್ಮೀರ ಕಣಿವೆಯ ಕೇವಲ ಐದು ಜಿಲ್ಲೆಗಳಲ್ಲಿ ಮಾತ್ರ ಇನ್ನೂ ಜೀವಂತವಾಗಿರುವ ಪ್ರತ್ಯೇಕತೆಯನ್ನು ಪೋಷಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಬಾಹುಳ್ಯದ ರಾಜ್ಯವೆಂದು ನಡೆಯುವ ತುಷ್ಟೀಕರಣದ ರಾಜಕೀಯವಾಗಲೀ ಅಥವಾ ಮಾಹಿತಿಯ ಕೊರತೆಯಿಂದ ಮಿಥ್ಯಾವಾದಗಳನ್ನೇ ನಂಬಿರುವ ಪ್ರತಿಪಾದನೆಗಳಾಗಲೀ ಜಮ್ಮು ಕಾಶ್ಮೀರದ ಹಿತದೃಷ್ಟಿಯಿಂದ ಕೊನೆಗೊಳ್ಳಬೇಕು.

Monday, October 10, 2016

ಜಮ್ಮು ಕಾಶ್ಮೀರದ ಕುರಿತು ತಿಳಿದುಕೊಳ್ಳಬೇಕಾದ ಒಂದಿಷ್ಟು

(ವಿಕ್ರಮ, ವಿಜಯದಶಮಿ ವಿಶೇಷಾ೦ಕ 2016 )

        ಸ್ವತಂತ್ರ ಭಾರತ ಉಗಮಗೊಂಡು ಏಳು ದಶಕಗಳು ಕಳೆದರು ದೇಶದ ಒಂದು ಪ್ರಮುಖ ರಾಜ್ಯ ಸಮಸ್ಯೆಯಾಗಿ ಉಳಿದಿದೆ ಹಾಗೂ ಇಂದಿಗೂ ಅದರ ವಿಲೀನದ ಪ್ರಶ್ನೆಯನ್ನು ಎತ್ತಲಾಗುತ್ತಿದೆ ಎನ್ನುವ ಅಂಶವೇ ಜಮ್ಮು ಕಾಶ್ಮೀರವನ್ನು ಕುರಿತು ಕುತೂಹಲವನ್ನು ಹುಟ್ಟಿಸುತ್ತದೆ. ಮಗ್ಗುಲ ಮುಳ್ಳು ಎಂದೇ ಕರೆಯಬಹುದಾದ ನೆರೆಯ ಪಾಕಿಸ್ತಾನ ಅವಕಾಶ ಸಿಕ್ಕಾಗಲೆಲ್ಲ ಭಾರತಕ್ಕೆ ಮಸಿಬಳಿಯಲು ಕಾಶ್ಮೀರ ವಿಷಯವನ್ನು ಎತ್ತುತ್ತದೆ. ಭಾರತದೊಂದಿಗಿನ ನಡೆಸಿದ ನೇರ ಯುದ್ಧದಲ್ಲಿ ಸೋಲುಂಡ ಪಾಕಿಸ್ತಾನ ಭಯೋತ್ಪಾದನೆಯ ಮೂಲಕ ಛಾಯಾ ಸಮರಮಾರ್ಗವನ್ನು ಹಿಡಿದಿದ್ದು ಕಾಶ್ಮೀರ ಅದರ ಪ್ರಥಮ ಗುರಿ ಎನ್ನುವುದು ಸುಸ್ಪಷ್ಟವಾಗಿದೆ. ಇನ್ನೊಂದೆಡೆ ಪೂರ್ವದ ಅರುಣಾಚಲವು ತನ್ನದು ಎಂದು ಹೇಳುವ ಚೀನಾ ಲಢಾಕ್ ಪ್ರದೇಶದ ಭೂಭಾಗವನ್ನು ಕಬಳಿಸಿದ್ದಲ್ಲದೇ ಆಗಾಗ ಗಡಿಯಲ್ಲಿ ತಂಟೆ ನಡೆಸುತ್ತದೆ. ಪಾಕಿಸ್ತಾನ, ಅಪಘಾನಿಸ್ತಾನ, ಚೀನಾ-ಟಿಬೇಟ್ ದೇಶಗಳೊಡನೆ ಗಡಿಹಂಚಿಕೊಂಡಿರುವ ಜಮ್ಮು ಕಾಶ್ಮೀರ ಪ್ರದೇಶ ಸರ್ವವಿಧದಲ್ಲೂ ಅತ್ಯಂತ ಆಯಕಟ್ಟಿನ ಪ್ರದೇಶ. ಮಧ್ಯ ಏಷಿಯಾ ಮತ್ತು ಯೂರೋಪಗಳಿಗೆ ಕಾಶ್ಮೀರದ ಮೂಲಕ ರಸ್ತೆ ಸಂಪರ್ಕ ಸಾಧ್ಯವಿದೆ. ಇತಿಹಾಸ ಪ್ರಸಿದ್ಧ ವ್ಯಾಪಾರಿ ಮಾರ್ಗ ಸಿಲ್ಕ್ ರೂಟ್ ಕಾಶ್ಮೀರದ ಗಿಲ್ಗಿಟ್ ಮೂಲಕವೇ ಹಾದುಹೋಗುವುದು. ದಕ್ಷಿಣ ಏಷಿಯಾಕ್ಕೆ ನೀರುಣಿಸುವ ಅನೇಕ ನದಿಗಳ ಉಗಮ ಸ್ಥಾನ ರಾಜ್ಯದ ಹಿಮಾಲಯ ಪ್ರದೇಶ. ಒಂದು ರೀತಿಯಲ್ಲಿ ಈ ಆಯಕಟ್ಟಿನ ಪ್ರದೇಶವನ್ನು ನಿಯಂತ್ರಿಸುವವರು ಇಡೀ ಏಷಿಯಾವನ್ನು ಪ್ರಭಾವಿಸಬಲ್ಲರು. ಆದ್ದರಿಂದ ಜಮ್ಮು ಕಾಶ್ಮೀರ ಭಾರತದ ಮಟ್ಟಿಗೆ ಅತ್ಯಂತ ಮಹತ್ವದ ಪ್ರದೇಶವಾಗಿದೆ.


      ಇದಲ್ಲದೇ ಜಮ್ಮು ಕಾಶ್ಮೀರದ ಕುರಿತು ತಿಳಿದುಕೊಳ್ಳಲು ಇನ್ನೂ ಕೆಲವು ಕಾರಣಗಳಿವೆ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಮಾನವ ಹಕ್ಕು ಉಲ್ಲಂಘನೆಯ ವಿಷಯ ಬಂದಾಗಲೆಲ್ಲ ಭಾರತಕ್ಕೆ ಮಸಿ ಬಳಿಯಲು ಕಾಶ್ಮೀರದ ವಿಷಯ ತರಲಾಗುತ್ತದೆ. ಭಾರತೀಯ ಸೇನೆ ಕಾಶ್ಮೀರದಲ್ಲಿ ಅಕ್ಷಮ್ಯ ಅಪರಾಧವನ್ನೆಸಗಿದೆ ಎಂದು ಗುಲ್ಲೆಬ್ಬಿಸಲಾಗುತ್ತದೆ. ಮಾನವ ಹಕ್ಕು ವಿಷಯವನ್ನೇ ವ್ಯಪಾರಿ ಬಂಡವಾಳ ಮಾಡಿಕೊಂಡಿರುವ ಕೆಲವು ಸಂಸ್ಥೆಗಳು ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲೂ ಕಾಶ್ಮೀರಿ ವಿಷಯವನ್ನಿಟ್ಟುಕೊಂಡು ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿವೆ. ಜೊತೆಗೆ ನಮ್ಮದೇ ದೇಶದ ಒಂದು ವರ್ಗದ ಬುದ್ಧಿಜೀವಿಗಳು ಶೈಕ್ಷಣಿಕ, ರಾಜಕೀಯ ಹಾಗೂ ನೀತಿ ನಿರೂಪಕ ವರ್ಗದ ವ್ಯಕ್ತಿಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಜಮ್ಮು ಕಾಶ್ಮೀರ ರಾಜ್ಯವನ್ನು ಕುರಿತು ತಪ್ಪು ಮಾಹಿತಿಯನ್ನು ಹರಡುವಲ್ಲಿ ಸಕ್ರಿಯರಾಗಿದ್ದಾರೆ. ನಿಯಂತ್ರಣ ರೇಖೇಯನ್ನೆ ಭಾರತ ಪಾಕಿಸ್ತಾನದ ಶಾಶ್ವತ ಗಡಿಯನ್ನಾಗಿ ಮಾಡಬೇಕೆನ್ನುವುದರಿಂದ ಹಿಡಿದು, ಕಾಶ್ಮೀರ ಸ್ವಾಯತ್ತವಾಗಲಿ, ಪಾಕಿಸ್ತಾನಕ್ಕೇ ಸೇರಲಿ ಎಂದು ಪ್ರತಿಪಾದಿಸುವವರೂ ನಮ್ಮಲ್ಲಿದ್ದಾರೆ.
        ಎರಡನೆಯದಾಗಿ ಜಮ್ಮು ಕಾಶ್ಮೀರ ರಾಜ್ಯದ ಜನಸಂಖ್ಯೆ 1.2ಕೋಟಿ. ಅಂದರೆ ದೇಶದ ಜನಸಂಖ್ಯೆಯ ಶೇ 1ರಷ್ಟು ಮಾತ್ರ ಆದರೆ 2000ದಿಂದ 2014ರವರೆಗಿನ ಕಾಲದಲ್ಲಿ ಕೇಂದ್ರದಿಂದ ಜಮ್ಮು ಕಾಶ್ಮೀರ ಪಡೆದ ಅನುದಾನ ಶೇ 10ರಷ್ಟು (ಸುಮಾರು 1.14ಲಕ್ಷ ಕೋಟಿ ರೂಪಾಯಿಗಳು), ತಲಾವಾರು ಲೆಕ್ಕ ಮಾಡಿದಾಗ ಇದು ಉತ್ತರಪ್ರದೇಶದಂತಹ ರಾಜ್ಯದ ತುಲನೆಯಲ್ಲಿ 21 ಪಟ್ಟು ಹೆಚ್ಚು. ಜೊತೆಗೆ ಕಣಿವೆಯಲ್ಲಿನ ಭಯೋತ್ಪಾದನೆ ನಿಗ್ರಹ ಮತ್ತು ಶಾಂತಿ ಸ್ಥಾಪನೆಯ ಸಲುವಾಗಿ ಸೇನೆಯನ್ನು ನಿಯೋಜಿಸಿದ್ದರ ವೆಚ್ಚವನ್ನೂ ಸೇರಿಸಬಹುದು. ರಾಜ್ಯವೊಂದರಲ್ಲಿ ಆಗಾಗ ಭುಗಿಲೇಳುವ ವಿರೋಧಿ ಶಕ್ತಿಗಳನ್ನು ಸಂತೈಸಲು ಇಷ್ಟೊಂದು ಸಂಪನ್ಮೂಲ ಪೋಲಾಗಬೇಕೆ? ಎನ್ನುವುದು ಒಂದು ಗಹನವಾದ ಪ್ರಶ್ನೆ.
      ಮೂರನೆಯದಾಗಿ, ಭಯೋತ್ಪಾದನಾ ಚಟುವಟಿಕೆಗಳ ಮಾಹಿತಿ ಕಲೆಹಾಕುವ ಸಂಸ್ಥೆ ಸೌತ್ ಏಷಿಯಾ ಟೆರರಿಸಂ ಪೋರ್ಟಲ್‌ನ ಅಂಕಿ ಅಂಶಗಳ ಪ್ರಕಾರ 1988ರಿಂದ ಇಂದಿನವರೆಗೆ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಭಯೋತ್ಪಾದನೆಯ ಹುಸಿಯುದ್ಧದಲ್ಲಿ 6229 ಯೋಧರು ಪ್ರಾಣಾರ್ಪಣೆಗೈದಿದ್ದಾರೆ. ಇತ್ತೀಚೆಗೆ ಹುತಾತ್ಮರಾದ ಗೋಕಾಕಿನ ಬಸವರಾಜ ಚನ್ನಪ್ಪಾ ಪಾಟಿಲ್, ನವಲಗುಂದದ ಹಸನಸಾಬ್  ಕುಡವಂದ್‌ರಂತಹ ಕರ್ನಾಟಕದ ಯೋಧರು ದೂರದ ಕಾಶ್ಮೀರದಲ್ಲಿ ಉಗ್ರಗಾಮಿಗಳ ಹೋರಾಟದಲ್ಲಿ ಪ್ರಾಣ ತೆತ್ತಿದ್ದಾರೆ. ಜೊತೆಗೆ ಸುಮಾರು 14 ಸಾವಿರಕ್ಕೂ ಹೆಚ್ಚು ನಾಗರಿಕರು, 23 ಸಾವಿರಕ್ಕೂ ಹೆಚ್ಚು ಉಗ್ರಗಾಮಿಗಳು ಬಲಿಯಾಗಿದ್ದಾರೆ. ಭಯೋತ್ಪಾದನೆಯ ಮೂಲಕ ಭಾರತದ ಮೇಲೆ ಛಾಯಾ ಸಮರದ ಮಾರ್ಗ ಹಿಡಿದಿರುವ ಪಾಕಿಸ್ತಾನದ ಪ್ರಮುಖ ಗುರಿ ಕಾಶ್ಮೀರ. ಕೊನೆಯದಾಗಿ ಒಂದು ಪ್ರದೇಶ ಮುಸಲ್ಮಾನ ಬಹುಸಂಖ್ಯವಾಗಿ ಪರಿವರ್ತಿತವಾದಾಗ ಉಂಟಾಗುವ ಸನ್ನಿವೇಶದ ಅಧ್ಯಯನ ಮಾದರಿಯನ್ನು ಕಾಶ್ಮೀರ ಕಣಿವೆಯಲ್ಲಿ ಕಾಣಬಹುದು.

ಜಮ್ಮು ಮತ್ತು ಕಾಶ್ಮೀರದ ಭೌಗೋಳಿಕ ಹರಹು ಮತ್ತು ಜನಸಮುದಾಯ
        2,22,236ಚದರ ಕಿಮೀ ವ್ಯಾಪ್ತಿಯ ಜಮ್ಮು ಕಾಶ್ಮೀರದಲ್ಲಿ ಮೂರು ಪ್ರಾಂತಗಳಿವೆ. 36 ಸಾವಿರ ಚದರ ಕಿಮೀ ವಿಸ್ತೀರ್ಣದ ಜಮ್ಮು, ಸುಮಾರು 22 ಸಾವಿರ ಚದರ ಕಿಮೀ ವಿಸ್ತೀರ್ಣದ ಕಾಶ್ಮೀರ ಹಾಗೂ 1 ಲಕ್ಷದ 64 ಸಾವಿರ ಚದರ ಕಿಮೀ ವಿಸ್ತೀರ್ಣವುಳ್ಳ ಲಢಾಕ್. ಇದರಲ್ಲಿ 78 ಸಾವಿರ ಚದರ ಕಿಮೀ (ಪಾಕ್ ಆಕ್ರಮಿತ ಕಾಶ್ಮೀರ ಅಥವಾ ಪಿಒಕೆ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ) ಪಾಕಿಸ್ತಾನದ ವಶದಲ್ಲಿಯೂ ಹಾಗೂ ಲಢಾಕ ಪ್ರಾಂತದ 27.5 ಸಾವಿರ ಚದರ ಕಿಮೀ ಮತ್ತು ಪಾಕಿಸ್ತಾನದಿಂದ ಉಡುಗೊರೆಯಾಗಿ ಪಡೆದ ಉತ್ತರ ಭಾಗದ 5 ಸಾವಿರ ಚದರ ಕಿಮೀ ಚೀನಾದ ವಶದಲ್ಲಿಯೂ ಇದೆ. ಅಂದರೆ ವಾಸ್ತವವಾಗಿ ಕಾಶ್ಮೀರ ಬ್ರಿಟಿಷರ ಕಾಲದ ಅಥವಾ ಮಹಾರಾಜ ಹರಿಸಿಂಗ್‌ರ ಆಳ್ವಿಕೆಗೆ ಒಳಪಟ್ಟಿದ್ದ ಜಮ್ಮು ಕಾಶ್ಮೀರ ರಾಜ್ಯದ 7.16% ಕ್ಷೇತ್ರ ಹಾಗೂ ಪ್ರಸ್ತುತ ಭಾರತೀಯ ಆಡಳಿತಕ್ಕೊಳಪಟ್ಟ ರಾಜ್ಯದ 15.63% ಕ್ಷೇತ್ರ ಮಾತ್ರ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಜಮ್ಮು ಕಾಶ್ಮೀರ ಮುಸಲ್ಮಾನ ಜನಸಂಖ್ಯಾ ಬಾಹುಳ್ಯವಿದೆ ಎನ್ನುವುದು ನಿಜವಾದರು ಅದು ಕೇವರ ಕಾಶ್ಮೀರ ಕಣಿವೆಯಲ್ಲಿ ಮಾತ್ರ. ಜಮ್ಮು ಕಾಶ್ಮೀರದಲ್ಲಿ ಸುನ್ನಿ ಮುಸಲ್ಮಾನರನ್ನು ಹೊರತುಪಡಿಸಿ ಶಿಯಾ, ಡೋಗ್ರಾ, ಕಾಶ್ಮೀರಿ ಪಂಡಿತ, ಸಿಖ್, ಬೌದ್ಧ, ಗುಜ್ಜರ, ಬಕರ್‌ವಾಲಾ, ಪಹಾರಿ,ಬಾಲ್ಟಿ, ಕ್ರಿಶ್ಚಿಯನ್ ಇತ್ಯಾದಿ ಬೇರೆ ಬೇರೆ ಮತೀಯ ಸಂಪ್ರದಾಯಗಳಿಗೆ ಸೇರಿದ 14 ಪ್ರಮುಖ ಕೋಮುಗಳಿವೆ. ಲಢಾಕಿನಲ್ಲಿ ಲೇಹ್ ಮತ್ತು ಕಾರ್ಗಿಲ್ ಎರಡು ಪ್ರಮುಖ ಪ್ರದೇಶಗಳು. ಲೆಹ್‌ನಲ್ಲಿ 77% ಬೌದ್ಧ ಸಮುದಾಯ ಹಾಗೂ ಇತರೆ ಷಿಯಾ ಮುಸ್ಲಿಂ ಮತ್ತು ಹಿಂದೂ ಜನವಸತಿಯಿದೆ. ಕಾರ್ಗಿಲ್ ಜಿಲ್ಲೆಯಲ್ಲಿ 80% ಪಹಾರಿ, ಗುಜ್ಜರ್ ಇತ್ಯಾದಿ ಗುಡ್ಡಗಾಡು ಮುಸ್ಲಿಂ ಸಮುದಾಯ ಹಾಗೂ ಇತರೆ ಅಲ್ಪಸಂಖ್ಯೆಯಲ್ಲಿ ಬೌದ್ಧರಿದ್ದಾರೆ. ಜಮ್ಮು ಪ್ರಾಂತದಲ್ಲಿ ಹಿಂದೂ-ಸಿಖ್ ಮತ್ತು ಮುಸ್ಲಿಂ ಜನಸಂಖ್ಯೆಯ ಅನುಪಾತ 70:30 ಪ್ರತಿಶತದಷ್ಟಿದೆ. ಇವರಲ್ಲಿ 15 ಲಕ್ಷಕ್ಕೂ ಅಧಿಕ ನಿರ್ವಸಿತರಿದ್ದಾರೆ. ಕಾಶ್ಮೀರ ಪ್ರಮುಖವಾಗಿ ಎರಡು ಪ್ರದೇಶಗಳನ್ನು ಒಳಗೊಂಡಿದೆ; ೭೦% ಭೂಭಾಗವುಳ್ಳ ಗುಡ್ಡಗಾಡು ಪ್ರದೇಶ ಮತ್ತು ಉಳಿದಂತೆ ಕಾಶ್ಮಿರಿ ಕಣಿವೆ ಪ್ರದೇಶ. ಗುಡ್ಡಗಾಡು ಪ್ರದೇಶದಲ್ಲಿ ಜನಾಂಗೀಯವಾಗಿ ಕಾಶ್ಮೀರಿಗಳಲ್ಲದ ಗುಜ್ಜರ, ಬಾಕೆರ್ವಾಲ್, ದಾರ್ದ, ಬಾಲ್ಟಿ ಇತ್ಯಾದಿ ಬುಡಕಟ್ಟು ಮುಸ್ಲಿಂ ಜನಾಂಗಗಳು ವಾಸವಾಗಿದ್ದರೆ ಕಾಶ್ಮೀರ ಕಣಿವೆಯಲ್ಲಿ ಬಹುಸಂಖೈಯಲ್ಲಿ ಸುನ್ನಿ ಮುಸ್ಲಿಂ ವಸತಿಯಿದೆ. ಅಂದರೆ ಕಾಶ್ಮೀರದಲ್ಲಿ 97% ಮುಸ್ಲಿಂ ಸಮುದಾಯವಿದ್ದರೂ ಪಂಗಡಗಳಾಗಿ ವಿಂಗಡನೆಗೊಂಡಿವೆ.
       ಕಾಶ್ಮೀರದ ಬಹುಸಂಖ್ಯೆಯ ಜನರು ಕಾಶ್ಮೀರಿ ಭಾಷೆಯನ್ನು ಮಾತನಾಡುವುದಿಲ್ಲ. ಲಢಾಕಿನ ಮುಖ್ಯ ಭಾಷೆ ಬಾಲ್ಟಿ ಮತ್ತು ಲಢಾಕಿ. ಹಾಗೆಯೇ ಜಮ್ಮುವಿನ ಮುಖ್ಯ ಭಾಷೆ ಡೋಗ್ರಿ.  ಇನ್ನೊಂದು ಆಸಕ್ತಿಕರ ವಿಷಯವೆಂದರೆ ರಾಜ್ಯದ ಬಳಕೆಯಲ್ಲಿರುವ ಭಾಷೆಗಳ ಶೇಕಡಾವಾರು ಪ್ರಮಾಣವನ್ನು ನೋಡಿದರೆ ಕಾಶ್ಮೀರಿ 35%, ಡೊಗ್ರಿ 21%, ಹಿಂದಿ 18%ರಷ್ಟಿದೆ. ಆದರೂ 1%ಕ್ಕಿಂತಲೂ ಕಡಿಮೆ ಜನರ ಬಳಕೆಯ ಭಾಷೆಯಾದ ಉರ್ದು ರಾಜ್ಯದ ಅಧಿಕೃತ ಭಾಷೆಯಾಗಿದೆ. ಉರ್ದು ದಕ್ಷಿಣ ಏಷಿಯಾ ದೇಶಗಳಲ್ಲಿರುವ ಮುಸ್ಲಿಮರೊಟ್ಟಿಗೆ ಗುರುತಿಸಿಕೊಂಡಿದೆ ಎನ್ನುವುದನ್ನು ಗಮನಿಸಬಹುದು.
ಕಾಶ್ಮೀರ, ಲಢಾಕ್ ಮತ್ತು ಜಮ್ಮು ಈ ಮೂರೂ ಪ್ರದೇಶಗಳು ಭೌಗೋಲಿಕವಾಗಿ, ಐತಿಹಾಸಿಕವಾಗಿ, ಸಂಪ್ರದಾಯ, ಧಾರ್ಮಿಕ ಆಚರಣೆ, ಭಾಷೆಗಳ ದೃಷ್ಟಿಯಿಂದ ಒಂದಕ್ಕಿಂತ ಇನ್ನೊಂದು ಭಿನ್ನ, ಇವುಗಳ ನಡುವೆ ಯಾವುದರಲ್ಲೂ ಹೋಲಿಕೆಯಿಲ್ಲ. ಜಮ್ಮು ಮತ್ತು ಲಢಾಕ್ ಪ್ರಾಂತಗಳು ಆರ್ಥಿಕ ಅಭೀವೃದ್ಧಿಯ ದೃಷ್ಟಿಯಿಂದಲೂ ಕಡೆಗಣಿಸಲ್ಪಟ್ಟಿವೆ.

ಪ್ರತ್ಯೇಕತೆಯೆ ಧ್ವನಿ ಇರುವುದು ಕಾಶ್ಮೀರ ಪ್ರಾಂತದ ಕೇವಲ ಐದು ಜಿಲ್ಲೆಗಳಲ್ಲಿ ಮಾತ್ರ
       ಪ್ರತೀ ಬಾರಿ ಪ್ರತ್ಯೇಕತೆಯ ಕೂಗು ಹೆಚ್ಚಾಗಿ ಹಿಂಸಾಚಾರ ಬುಗಿಲೆದ್ದಾಗಲೂ ಇಡೀ ಜಮ್ಮು ಕಾಶ್ಮೀರ ಹೊತ್ತುರಿಯುತ್ತಿದೆ ಎಂದು ಮಾಧ್ಯಮಗಳು ಬಿಂಬಿಸುತ್ತವೆ. ಆದರೆ ಇದು ಭಾರತವಿರೋಧಿ ಬೇರಿರುವುದು ರಾಜ್ಯದ ಒಂದು ಸೀಮಿತ ಪ್ರದೇಶದಲ್ಲಿ ಎನ್ನುವುದ ತಥ್ಯ. ಜಮ್ಮು ಕಾಶ್ಮೀರದಲ್ಲಿ ಒಟ್ಟೂ 22 ಜಿಲ್ಲೆಗಳಿವೆ ಅವುಗಳಲ್ಲಿ ಕೇವಲ ಶ್ರೀನಗರ, ಬಾರಾಮುಲ್ಲಾ, ಅನಂತನಾಗ್, ಕುಲ್‌ಗಾಮ್, ಪುಲ್‌ವಾಮಾ ಈ ಐದು ಜಿಲ್ಲೆಗಳಲ್ಲಿ ಮಾತ್ರ ಪ್ರತ್ಯೇಕತೆಯ ಚಳುವಳಿ ಹೋರಾಟ ನಡೆಯುವುದು. ಉಳಿದ 17 ಜಿಲ್ಲೆಗಳಲ್ಲಿ ಇದುವರೆಗೆ ಒಮ್ಮೆಯೂ ಭಾರತ ವಿರೋಧಿ ಪ್ರದರ್ಶನ ಹರತಾಳಗಳು ನಡೆದಿಲ್ಲ. ಇನ್ನೊಂದು ಮುಖ್ಯ ಅಂಶ ಎಂದರೆ ಈ ಐದು ಜಿಲ್ಲೆಗಳು ಪಾಕಿಸ್ತಾನದ ಗಡಿ ಮತ್ತು ಗಡಿನಿಯಂತ್ರಣ ರೇಖೆಯಿಂದ ಸಾಕಷ್ಟು ದೂರದಲ್ಲಿವೆ. ಗಡಿನಿಯಂತ್ರಣ ರೇಖೆಗೆ ತಾಗಿರುವ ಪೂಂಛ್ ಮತ್ತು ಕಾರ್ಗಿಲ್ ಜಿಲ್ಲೆಗಳು ಶೇ. 90ರಷ್ಟು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿವೆ. ಆದರೆ ಈ ಜಿಲ್ಲೆಗಳಲ್ಲಿ ಇದುವರೆಗೆ ಒಬ್ಬನೇ ಒಬ್ಬ ಪ್ರತ್ಯೇಕತಾವಾದಿ ನಾಯಕ ಹುಟ್ಟಿಲ್ಲ, ಎಂದೂ ಭಾರತವಿರೋಧಿ ಪ್ರದರ್ಶನ ನಡೆದಿಲ್ಲ.
      1947ರ ಸಂತರದ ಕಾಶ್ಮೀರದ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಸುನ್ನಿ ಮುಸಲ್ಮಾನ ಕೇಂದ್ರಿತ ರಾಜಕೀಯ ವ್ಯವಸ್ಥೆ ತನ್ನ ಬೇರನ್ನು ಆಳವಾಗಿ ಇಳಿಸಿದೆ ಎನ್ನುವುದನ್ನು ಸ್ಪಷ್ಟವಾಗಿ ಕಾಣುಬಹುದು. ರಾಜ್ಯದ ಶೇ 15ರಷ್ಟು ಪ್ರದೇಶದ ಮೂಲದಲ್ಲಿರುವ ಸುಮಾರು 33%ರಷ್ಟಿರುವ ಕಾಶ್ಮೀರಿ ಮಾತನಾಡುವ ಸುನ್ನಿ ಮುಸಲ್ಮಾನ ಸಮುದಾಯಕ್ಕೆ ಸೇರಿದ ಜನರು ಜಮ್ಮು ಕಾಶ್ಮೀರ ಆಡಳಿತ, ವ್ಯಾಪಾರ ವಹಿವಾಟು, ಕೃಷಿ ಎಲ್ಲವನ್ನೂ ನಿಯಂತ್ರಿಸುತ್ತಾರೆ. ಪ್ರತ್ಯೇಕತಾವಾದಿ ಹುರಿಯತ್ ಕಾನ್ಪರೆನ್ಸ್ ಹಾಗೂ ರಾಜ್ಯದ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ(ಪಿಡಿಪಿ) ಮತ್ತು ನ್ಯಾಶನಲ್ ಕಾನ್ಫರೆನ್ಸ್(ಎನ್‌ಸಿ)ಗಳ ನೀತಿಗಳನ್ನು ಇದೇ ಗುಂಪು ನಿರೂಪಿಸುತ್ತದೆ. ಕಾಂಗ್ರೆಸ್‌ನ ನೀತಿಯನ್ನು ಕೂಡ ಪ್ರಭಾವಿಸುತ್ತದೆ.
        ಹುರಿಯತ್ ಕಾನ್ಫರೆನ್ಸ್ ಮುಂತಾದ ಪ್ರತ್ಯೇಕತಾವಾದಿ ಸಂಘಟನೆಗಳು, ಸ್ವಾಯತ್ತತೆಯ ಬೇಡಿಕೆಯಿಡುವ ನ್ಯಾಶನಲ್ ಕಾನ್ಫರೆನ್ಸ್, ಪಿಡಿಪಿ ಮೊದಲಾದ ರಾಜಕೀಯ ಪಕ್ಷಗಳು, ಪಾಕಿಸ್ತಾನಿ ಭಯೊತ್ಪಾದಕರ ಒಳನುಸುಳುವಿಕೆಗೆ ಸಹಾಯ ಮಾಡುವ ಗುಂಪುಗಳು, ಪ್ರತಿಭಟನೆಯ ಹೆಸರಿನಲ್ಲಿ ಕಲ್ಲೆಸೆದು ಹಿಂಸಾಚಾರ ಮಾಡುವವರು, ದೆಹಲಿಯ ಬುದ್ದಿಜೀವಿ ವರ್ಗಗಳಲ್ಲಿ ಪ್ರತ್ಯೇಕತೆಯ ಭಾಷಣ ಬಿಗಿಯುವವರು, ಮಾಧ್ಯಮಗಳಲ್ಲಿ ಕಾಶ್ಮೀರವನ್ನು ಪ್ರತಿನಿಧಿಸುವವರು ಇವರೆಲ್ಲರೂ ಕಾಶ್ಮೀರಿ ಕಣಿವೆಯ ಸುನ್ನಿ ಮುಸಲ್ಮಾನ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಜಮ್ಮು ಕಾಶ್ಮೀರದ ನಾಯಕರೆಂದು ಪ್ರತಿಬಿಂಬಿಸಲ್ಪಡುವ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಮಂತ್ರಿ ನ್ಯಾಶನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲ, ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಜಮ್ಮು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸೈಫ್ ಉದ್ದೀನ ಸೋಜ್, ಗುಲಾಮ್ ನಬೀ ಆಜಾದ್, ಮಾಜಿ ಪ್ರತ್ಯೇಕತಾ ಹೋರಾಟಗಾರ ರಾಜ್ಯಸಂಪುಟದಲ್ಲಿ ಹಾಲಿ ಮಂತ್ರಿ ಸಜಾದ್ ಲೋನ್, ಪ್ರತ್ಯೇಕತಾವಾದಿ ಮುಂದಾಳುಗಳಾದ ಅಬ್ದುಲ್ ಗನಿ ಭಟ್, , ಯಾಸಿನ್ ಮಲಿಕ, ಶಬ್ಬೀರ್ ಶಾ, ಗ್ರ್ಯಾಂಡ್ ಮುಫ್ತಿ, ಹುರಿಯತ್ ಕಾನ್ಫರೆನ್ಸ್‌ನ ಸೈಯ್ಯದ್ ಅಲಿ ಶಾ ಗಿಲಾನಿ, ಮಿರ್ಜ್ವಾ ಉಮರ್ ಫಾರೂಕ್ ಇವರೆಲ್ಲ ಒಂದೇ ಪಂಗಡಕ್ಕೆ ಸೇರಿದವರು, ’ಕಾಶ್ಮೀರಿ ಸುನ್ನಿ ಮುಸಲ್ಮಾನ’. ಅದಲ್ಲದೆ ಜಮ್ಮು ಕಾಶ್ಮೀರ ಹೈಕೋರ್ಟ ಬಾರ್ ಅಸೋಸಿಯೇಶನ್ ಅಧ್ಯಕ್ಷ, ಜಮ್ಮು ಕಾಶ್ಮೀರ ವಿಶ್ವವಿದ್ಯಾಲಯ ಶಿಕ್ಷಕರ ಸಂಘದ ಅಧ್ಯಕ್ಷ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಇವರೆಲ್ಲ ಕಾಶ್ಮೀರಿ ಸುನ್ನಿ ಸಮುದಾಯಕ್ಕೆ ಸೇರಿದವರೇ. 99% ಕಾಶ್ಮೀರಿ ವ್ಯಾಖ್ಯಾನಕಾರರು, ವರದಿಗಾರರು ಸುನ್ನಿ ಮುಸ್ಲಿಮರು, ಕಾಶ್ಮೀರದ ಬಹುತೇಕ ಎಲ್ಲಾ ಸಾಮಾಜಿಕ ಜನಸಂಘಟನೆಗಳು ಸುನ್ನಿ ಮುಸಲ್ಮಾನರ ನಿಯಂತ್ರಣದಲ್ಲೇ ಇದೆ. ರಾಜ್ಯದ ಆಡಳಿತ ಮತ್ತು ಆಡಳಿತಾತ್ಮಕ ಸೇವೆಗಳಲ್ಲಿ ಕಾಶ್ಮೀರಿ ಕಣಿವೆಯ ಸುನ್ನಿ ಮುಸ್ಲಿಮರದೇ ಪ್ರಾಬಲ್ಯವಿದೆ. ಆದರೆ, ಉಳಿದಂತೆ ಷಿಯಾ ಮತ್ತು ಗುಡ್ಡಗಾಡು ಪ್ರದೇಶದ ಗುಜ್ಜರ, ಪಹಾಡಿ ಇತ್ಯಾದಿ ಮುಸ್ಲಿಂ ಜನರ ನಡುವಿನಿಂದ ಅಥವಾ ರಾಜ್ಯದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ೮೫%ಗೂ ಮಿಕ್ಕಿ ಭೂಭಾಗ ಹೊಂದಿರುವ ಜಮ್ಮು ಮತ್ತು ಲಢಾಕ್ ಪ್ರಾಂತಗಳ ಜನರಿಗೆ ರಾಜ್ಯದ ಆಡಳಿತ, ವ್ಯಾಪಾರ, ಪ್ರವಾಸೋದ್ಯಮಗಳಲ್ಲಿ ಸರಿಯಾದ ಪ್ರಾತಿನಿಧ್ಯ ಇದುವರೆಗೂ ದೊರಕಿಲ್ಲ.

ಸಂವಿಧಾನದ 370ನೇ ವಿಧಿ ತಾತ್ಕಾಲಿಕ, ನಮಗೆ ಗೊತ್ತಿರದ 35A!
ಭಾರತದೊಂದಿಗಿನ ಜಮ್ಮು ಕಾಶ್ಮೀರ ವಿಲೀನವೇ ಪೂರ್ಣವಾಗಿಲ್ಲ, ರಾಜ್ಯದಲ್ಲಿ ಜನಮತಗಣನೆ ನಡೆಸಬೇಕು ಮತ್ತು ಸ್ವಾಯತ್ತv ನೀಡಬೇಕು ಮುಂತಾದ ಬೇಡಿಕೆಗಳನ್ನು ಆಗಾಗ ಮುಂದಿಡಲಾಗುತ್ತದೆ. ಕಾಶ್ಮೀರ ಭಾರತ ರಾಷ್ಟ್ರದ ಅಭಿನ್ನ ಅಂಗವಾಗಿತ್ತು ಎನ್ನುವುದು ಐತಿಹಾಸಿಕ ಸತ್ಯ. 1947 ಆಗಸ್ಟ 15ರ ಮಧ್ಯರಾತ್ರಿಗೆ ಭಾರತೀಯ ಸ್ವಾತಂತ್ರ್ಯ ಕಾಯಿದೆ 1947 (India Independence Act 1947)ರ ಅನ್ವಯ ಬ್ರಿಟಿಷರ ನೇರ ಆಡಳಿತಕ್ಕೊಳಪಟ್ಟ ಪ್ರಾಂತಗಳ ಮೇಲೆ ಬ್ರಿಟನ್ನಿನ ಸಾರ್ವಭೌಮತೆ ಕೊನೆಗೊಂಡುಹೊಸದಾಗಿ ನಿರ್ಮಿತವಾದ ಡೊಮಿನಿಯನ್‌ಗಳಾದ ಭಾರತ ಮತ್ತು ಪಾಕಿಸ್ತಾನಗಳಿಗೆ ಅಧಿಕಾರ ಹಸ್ತಾಂತರಗೊಂಡಿತು. ಹಾಗೆಯೇ ಸಾರ್ವಭೌಮತೆ ಪಡೆದ ಸಂಸ್ಥಾನ ರಾಜ್ಯಗಳು ಒಂದೊಂದಾಗಿ ಭಾರತ ಮತ್ತು ಪಾಕಿಸ್ತಾನಗಳಲ್ಲಿ ವಿಲೀನಗೊಂಡವು. ಮೈಸೂರು, ಟ್ರಾವಾಂಕುರ್, ಪಟಿಯಾಲ ಮೊದಲಾದ ಸಂಸ್ಥಾನಗಳು ಭಾರತದೊಂದಿಗೆ ವಿಲಯನ ಒಪ್ಪಂದಕ್ಕೆ ಸಹಿಹಾಕಿದ ಮಾದರಿಯಲ್ಲೇ ಮಹಾರಾಜ ಹರಿಸಿಂಗ್ ಆಳ್ವಿಕೆಗೆ ಒಳಪಟ್ಟಿದ್ದ ಜಮ್ಮು ಕಾಶ್ಮೀರ 1947ರ ಅಕ್ಟೋಬರ್ 26ರಂದು ಭಾರತದಲ್ಲಿ ವಿಲೀನವಾಯಿತು. ಆದ್ದರಿಂದ ಜಮ್ಮು ಕಾಶ್ಮೀರದ ವಿಲೀನ ಅಂತಿಮ ಮತ್ತು ರಾಜ್ಯವು ಭಾರತ ಗಣತಂತ್ರದ ಅವಿಭಾಜ್ಯ ಅಂಗವಾಗಿದೆ. 1947ರಲ್ಲಿ ಪಾಕಿಸ್ತಾನ ಜಮ್ಮು ಕಾಶ್ಮೀರದ ಮೇಲೆ ಆಕ್ರಮಣ ನಡೆಸಿ ರಾಜ್ಯದ ಒಂದಿಷ್ಟು ಭಾಗವನ್ನು ಕಬಳಿಸಿತು. ಪ್ರಧಾನಿ ನೆಹರು ಈ ವಿಷಯವನ್ನು ವಿಶ್ವಸಂಸ್ಥೆಗೆ ಒಯ್ದ ಪರಿಣಾಮವಾಗಿ ಈ ವಿಷಯಕ್ಕೆ ಶೀಘ್ರ ಪರಿಹಾರ ಸಾಧ್ಯವಿರಲಿಲ್ಲ. 1950ರಲ್ಲೂ ಇದೇ ಪರಿಸ್ಥಿತಿ ಮುಂದುವರೆದಿದ್ದರಿಂದ ಯುದ್ಧಪೀಡಿತ ಪ್ರದೇಶವಾದ ಜಮ್ಮು ಕಾಶ್ಮೀರ ರಾಜ್ಯಕ್ಕೆ ಭಾರತದ ಸಂವಿಧಾನವನ್ನು ವಿಸ್ತರಿಸುವ ಸಲುವಾಗಿ ರಾಜ್ಯದ ಶಾಸಕಾಂಗ ಸಭೆಯನ್ನು ರಚಿಸಿ ಒಪ್ಪಿಗೆ ಪಡೆಯುವುದು ಸಾಧ್ಯವಿರಲಿಲ್ಲ. ಆದ್ದರಿಂದ ರಾಜ್ಯದಲ್ಲಿ ಭಾರತ ಗಣತಂತ್ರದ ಸಂವಿಧಾನವನ್ನು ಜಾರಿಗೆ ತರುವ ತಾತ್ಕಾಲಿಕ ಮತ್ತು ಸಂಕ್ರಮಣ ಮಾರ್ಗವಾಗಿ 370ನೇ ವಿಧಿಯನ್ನು ಸೇರಿಸಿ ರಾಷ್ಟ್ರಾಧ್ಯಕ್ಷರಿಗೆ ಸಂವಿಧಾನ ಮತ್ತು ಸಂಸತ್ತು ಅಂಗೀಕರಿಸಿದ ಇತರ ಕಾನೂನುಗಳನ್ನು ಜಾರಿಗೊಳಿಸುವ ಪರಮಾಧಿಕಾರವನ್ನು ನೀಡಲಾಯಿತು. 370ನೇ ವಿಧಿಯಲ್ಲಿ ಶೇಖ್ ಅಬ್ದುಲ್ಲನ ಅಣತಿಯಂತೆ ಕೇಂದ್ರದ ಯಾವುದೇ ಕಾನೂನನ್ನು ಜಾರಿಗೊಳಿಸಬೇಕಾದರೆ ರಾಜ್ಯ ಶಾಸನಸಭೆಯ ಒಪ್ಪಿಗೆ ಪಡೆಯಬೇಕೆಂಬ ವಿಷಯವನ್ನೂ ಸೇರಿಸಲಾಯಿತು. 370ನೇ ವಿಧಿಯು ಕೇವಲ ತಾತ್ಕಾಲಿಕ ಮತ್ತು ಇದು ಜಮ್ಮು ಕಾಶ್ಮೀರ ರಾಜ್ಯಕ್ಕೆ ಸ್ವಾಯುತ್ತತೆಯನ್ನು ನೀಡುತ್ತದೆ ಎನ್ನುವುದು ಸತ್ಯಕ್ಕೆ ದೂರವಾದುದು. ದುರದೃಷ್ಟದ ವಿಷಯವೆಂದರೆ ಶೇಖ್ ಅಬ್ದುಲ್ಲ ಹಾಗೂ ತದನಂತರದ ಜಮ್ಮು ಕಾಶ್ಮೀರದ ಸರ್ಕಾರಗಳು 370ನೇ ವಿಧಿಯ ದುರುಪಯೋಗವನ್ನು ನಿರಂತರವಾಗಿ ನಡೆಸಿಕೊಂಡು ಬಂದಿವೆ. ತಾತ್ಕಾಲಿಕ ಪ್ರಾವಧಾನವಾಗಿದ್ದ 370ನೇ ವಿಧಿ ಇನ್ನೂ ರದ್ದಾಗಿಲ್ಲ. ಇದರ ಜೊತೆಗೆ ನೆಹರು ಶೇಖ್ ಸ್ನೇಹದ ಕೊಡುಗೆಯಾಗಿ 1954ರಲ್ಲಿ ಸಂವಿಧಾನ ತಿದ್ದುಪಡಿಯ ಸಂಸತ್ತಿನ ಪರಮಾಧಿಕಾರವನ್ನೂ ಬೈಪಾಸ್ ಮಾಡಿ ಸಂವಿಧಾನ ಆಜ್ಞೆಯ ಮೂಲಕ ಜಮ್ಮು ಕಾಶ್ಮೀರ ರಾಜ್ಯಕ್ಕೆ ಸಂಭಂಧಿಸಿದಂತೆ 35A ಎನ್ನುವ ಹೊಸ ವಿಧಿಯನ್ನು ಸಂವಿಧಾನಕ್ಕೆ ಸೇರಿಸಲಾಯಿತು. ಈ ವಿಧಿಯಲ್ಲಿ ಹೇಳಿದಂತೆ ರಾಜ್ಯ ಸರ್ಕಾರದ ನೌಕರಿ, ರಾಜ್ಯದಲ್ಲಿ ಸ್ಥರಾಸ್ತಿಯನ್ನು ಖರೀದಿಸುವುದು, ನಿವಾಸ ಮಾಡುವುದು, ರಾಜ್ಯ ಸರ್ಕಾರದ ವಿದ್ಯಾರ್ಥಿ ವೇತನ ಮೊದಲಾದ ವಿಷಯಗಳಲ್ಲಿ ರಾಜ್ಯ ಮಾಡುವ ಕಾನೂನುಗಳು ಭಾರತ ಸಂವಿಧಾನ ನೀಡುವ ಮೂಲಭೂತ ಹಕ್ಕುಗಳ ವ್ಯಾಪ್ತಿಯಿಂದ ಪ್ರಶ್ನಾತೀತವಾಗಿವೆ. ಉದಾಹರಣೆಗಾಗಿ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಬೇರೆ ರಾಜ್ಯದ ಜನರು ಭೂಮಿ ಖರೀದಿಸ ವಾಸ ಮಾಡವುದು ಸಾಧ್ಯವಿಲ್ಲ ಎಂದು ಕಾನೂನು ಮಾಡಲಾಗಿದೆ. ಇದು ಭಾರತದ ಸಂವಿಧಾನದ ಪ್ರಕಾರ ಮೂಲಭೂತ ಹಕ್ಕಿಗೆ ವಿರುದ್ಧವಾದುದು ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಾಗಿಲ್ಲ. ಹೀಗೆ ಸಂವಿಧಾನ 370 ಮತ್ತು 35A ವಿಧಿಗಳ ದುರ್ಬಳಕೆಯಿಂದ ಜಮ್ಮು ಕಾಶ್ಮೀರದಲ್ಲಿ ಘೋರ ತಾರತಮ್ಯ ನಿರಂತರ ನಡೆದು ಬಂದಿದೆ. ಆಸಕ್ತಿಯ ವಿಷಯವೆಂದರೆ 35A ವಿಧಿ ಸಂವಿಧಾನದ ಪಠ್ಯದಲ್ಲೆಲ್ಲೂ ಕಾಣಸಿಗುವುದಿಲ್ಲ.

ನಿರಾಶ್ರಿತರ ಕೇಂದ್ರ ಜಮ್ಮು
ಸಾಮಾನ್ಯವಾಗಿ ಕಾಶ್ಮೀರದಲ್ಲಿ ಹಿಂದೂಗಳ ಮೇಲಾಗುವ ದೌರ್ಜನ್ಯದ ವಿಷಯ ಬಂದಾಗ ಕಣಿವೆ 1985ರಿಂದ 95ರ ಕಾಲದಲ್ಲಿ ಇಸ್ಲಾಂ ಮೂಲಭೂತವಾದಿಗಳ ತೀವ್ರ ಹಿಂಸೆ ಅತ್ಯಾಚಾರಕ್ಕೊಳಗಾಗಿ ಕಾಶ್ಮೀರಿ ಕಣಿವೆಯಲ್ಲಿ ತಮ್ಮ ಮನೆ ಆಸ್ತಿಪಾಸ್ತಿ ತೊರೆದ ಜೀವವನ್ನು ಕೈಹಿಡಿದು ಓಡಿಬಂದ ಸಹಸ್ರಾರು ಕಾಶ್ಮೀರಿ ಪಂಡಿತ ಕುಟುಂಬಗಳನ್ನು ಉಲ್ಲೇಖಿಸಲಾಗುತ್ತದೆ. ಈಗಲೂ ಜಮ್ಮು ಮತ್ತು ದೆಹಲಿಯ ನಿರಾಶ್ರಿತ ಶಿಬಿರಗಳಲ್ಲಿ ಪುನಃ ತಮ್ಮ ಮನೆಗೆ ವಾಪಸ್ಸು ಹೋಗುವ ಕನಸನ್ನು ಇಟ್ಟುಕೊಂಡಿರುವ ಲಕ್ಷಾಂತರ ಮಂದಿ ಪಂಡಿತ ಸಮುದಾಯದ ಸಂತ್ರಸ್ತರಿದ್ದಾರೆ. ಆದರೆ ಪಂಡಿತ ಸಮುದಾಯಕ್ಕೆ ಸೇರಿರದ ಸುಮಾರು 15 ಲಕ್ಷಕ್ಕೂ ಹೆಚ್ಚು ನಿರಾಶ್ರಿತರು ದಶಕಗಳಿಂದ ಜಮ್ಮುವಿನ ನಿರಾಶ್ರಿತ ಶಿಬಿರಗಳಲ್ಲಿ ದಯನೀಯ ಸ್ಥಿತಿಯಲ್ಲಿ ಜೀವನ ಮಾಡುತ್ತಿದ್ದಾರೆ. ಇವರಲ್ಲಿ ಏಳು ದಶಕಗಳ ಹಿಂದೆ ದೇಶ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದಿಂದ ವಲಸೆ ಬಂದ ಸುಮಾರು 2 ಲಕ್ಷ ಜನರಲ್ಲಿ ಮೂರನೇ ತಲೆಮಾರು ಈಗ ನಡೆದಿದೆ. ಪಾಕಿಸ್ತಾನದೊಂದಿಗೆ ಪ್ರತಿಬಾರಿ ಯುದ್ಧವಾದಾಗಲೂ ಅನಿವಾರ್ಯವಾಗಿ ಹೊರದೂಡಲ್ಪಟ್ಟ ಗಡಿ ಪ್ರದೇಶದ ನಿವಾಸಿಗಳು ತಮ್ಮ ರಾಜ್ಯದಲ್ಲೇ ನಿರಾಶ್ರಿತರು! ಇವರ ಸಂಖ್ಯೆ ಸುಮಾರು 3.5ಲಕ್ಷ. ಇನ್ನೂ 1947ರಲ್ಲಿ ಪಾಕಿಸ್ತಾನ ಮಿಲಿಟರಿ ಕಾರ್ಯಾಚರಣೆಯ ಮೂಲಕ ಆಕ್ರಮಿಸಿಕೊಂಡ ಪ್ರದೇಶದ ನಿರಾಶ್ರಿತರು ಸುಮಾರು 12ಲಕ್ಷ, ಇವರೊಟ್ಟಿಗೆ ಕಣಿವೆಯಿಂದ ಹೊರದಬ್ಬಲ್ಪಟ್ಟು ಜಮ್ಮುವಿನಲ್ಲಿ ಆಶ್ರಯ ಪಡೆದ ಸುಮಾರು ೩ಲಕ್ಷ ಜನರನ್ನು ಸೇರಿಸಿದರೆ ರಾಜ್ಯದಲ್ಲಿ ಸುಮಾರು 20ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದಿದ್ದು ಜಮ್ಮುವನ್ನು ನಿರಾಶ್ರಿತರ ಕೇಂದ್ರವೆಂದೇ ಕರೆಯಬಹುದೇನೋ!.

      ಇವುಗಳಲ್ಲದೇ ಜಮ್ಮು ಕಾಶ್ಮೀರಕ್ಕೆ ಸಂಭಂಧಿಸಿದ ಇನ್ನೂ ಅನೇಕ ಸತ್ಯಗಳು, ಬೆಳಕು ಕಾಣದ ನೋವಿನ ಕಥೆಗಳು ಕಾಲಗರ್ಭದಲ್ಲಿ ಅಡಗಿವೆ. ದುರದೃಷ್ಟವೆಂದರೆ ಮಿಥ್ಯಾವಾದಗಳೇ ಇನ್ನೂ ತನ್ನ ಪ್ರಭಾವವನ್ನು ಉಳಿಸಿಕೊಂಡಿವೆ ಮತ್ತು ಜಮ್ಮು ಕಾಶ್ಮೀರದ ರಾಜಕೀಯ ಹಾಗೂ ಆಡಳಿತಾತ್ಮಕ ನೀತಿಗಳನ್ನು ದಾರಿತಪ್ಪಿಸುತ್ತಿವೆ. ವಾಸ್ತವದ ನೆಲೆಗಟ್ಟಿನ ಮೇಲೆ ಜಮ್ಮು ಕಾಶ್ಮೀರವನ್ನು ಕಾಣುವುದು ದೇಶಹಿತದ ದೃಷ್ಟಿಯುಂದ ಅತ್ಯಂತ ಅಗತ್ಯವಾಗಿದೆ

Wednesday, June 29, 2016

ವಿಶ್ವದಂಗಳದಲ್ಲಿ ಭಾರತದ ಹೆಜ್ಜೆಗುರುತುಗಳು

(ಪುಂಗವ  01/07/2016)

     ಇಂದಿನ ವೈಶ್ವಿಕ ಸನ್ನಿವೇಶದಲ್ಲಿ ಯಾವುದೇ ದೇಶವು ಇನ್ನೊಂದು ದೇಶದ ಮೇಲೆ ಅವಲಂಬಿಸದೇ, ಪರಸ್ಪರ ಸಹಕಾರವಿಲ್ಲದೇ, ಒಂದು ಇನ್ನೊಂದರ ಪ್ರಭಾವಕ್ಕೊಳಗಾಗದೇ ಸರ್ವಸ್ವತಂತ್ರವಾಗಿ ತನ್ನ ಆಗುಹೋಗುಗಳನ್ನು ನಿರ್ವಹಿಸುವುದು ಅಸಾಧ್ಯ. ಜಾಗತೀಕರಣವು ಆಳವಾಗುತ್ತಿರುವಂತೆ ತನ್ನ ಆಂತರಿಕ ನೀತಿಗಳನ್ನು ವೈಶ್ವಿಕ ಆಯಾಮದಲ್ಲಿ ನೋಡುವುದು, ಅದಕ್ಕನುಗುಣವಾಗಿ ತನ್ನ ವಿದೇಶೀ ನೀತಿಯನ್ನು ರೂಪಿಸುವುದು ಪ್ರತಿಯೊಂದು ದೇಶಕ್ಕೂ ಅನಿವಾರ್ಯ. ಅದರಲ್ಲೂ ಭಾರತದಂತಹ ಅಘಾದ ಜನಬಾಹುಳ್ಯ, ಸಾಮಾಜಿಕ ವೈವಿಧ್ಯ, ಭೌಗೋಳಿಕ ವಿಸ್ತಾರ, ಆರ್ಥಿಕ ಪ್ರಗತಿಯ ತುರ್ತು, ಹೊರದೇಶಗಳಿಗೆ ವಲಸೆ ಹೋದ ವಿಶಾಲ ಜನಸಮೂಹವುಳ್ಳ ದೇಶದಲ್ಲಿ ವಿದೇಶೀ ನೀತಿ ಸರಿಯಾದ ದಿಕ್ಕಿನಲ್ಲಿ ಸಾಗುವುದು ಅತ್ಯಂತ ಮಹತ್ವವಾಗಿದೆ. 

     ಬಾಹ್ಯ ವಾತಾವರಣವನ್ನು ರಾಷ್ಟ್ರೀಯ ಹಿತಾಸಕ್ತಿಗೆ ಅನುಕೂಲಕರವಾಗಿ ರೂಪಿಸಿಕೊಳ್ಳವುದರ ಮೇಲೆ ಭಾರತದ ದೇಶೀಯ ಪ್ರಗತಿಯ ಪ್ರಯತ್ನದ ಯಶಸ್ಸು ಅವಲಂಬಿತವಾಗಿದೆ ಎನ್ನವುದು ಪ್ರಥಮ ಪ್ರಧಾನಿ ನೆಹರೂರವರಿಂದ ಹಿಡಿದು ಇದುವರೆಗೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಎಲ್ಲ ನೇತಾರರರಿಗೂ ಅರ್ಥವಾಗಿದ್ದರೂ, ವಿಶ್ವದಲ್ಲಿ ಭಾರತದ ಪ್ರಭಾವ ಮತ್ತೆ ಮುಂಚೂಣಿಗೆ ಬರುವಂತೆ ವಿದೇಶಾಂಗ ವ್ಯವಹಾರವನ್ನು ನಿರೂಪಿಸವವಲ್ಲಿ ಇದುವರೆಗಿನ ಸರ್ಕಾರಗಳಿಗೆ ನಿರೀಕ್ಷಿತ ಯಶಸ್ಸು ದೊರಕಿರಲಿಲ್ಲ. ದೇಶದ ಆರ್ಥಿಕ ಸ್ಥಿತಿ ಮತ್ತು ಸಾಮಾಜಿಕ ಸ್ಥಿತಿಗಳ ಜೊತೆಗೆ ದೃಢ ನಿರ್ಧಾರ ಕೈಗೊಳ್ಳಬಲ್ಲ ಸಾಮರ್ಥ್ಯವುಳ್ಳ ನಾಯಕತ್ವದ ಕೊರತೆಯೂ ಇದಕ್ಕೆ ಕಾರಣವಿರಬಹುದು.
     ಆದರೆ ಕಳೆದ ಎರಡು ವರ್ಷಗಳಲ್ಲಿ ಭಾರತದ ಬಗ್ಗೆ ಪ್ರಪಂಚದ ದೇಶಗಳ ಅಭಿಪ್ರಾಯದಲ್ಲಿ ಧನಾತ್ಮಕ ಧೋರಣೆ, ಬೇರೆ ಬೇರೆ ದೇಶಗಳು ಭಾರತದೊಡನೆ ಪರಸ್ಪರ ಸಹಕಾರ ಹಾಗೂ ವ್ಯವಹಾರ ವರ್ಧಿಸುವಲ್ಲಿ ತೋರಿಸುತ್ತಿರುವ ಆಸಕ್ತಿ, ವೈಶ್ವಿಕ ನಿರ್ಣಯಗಳಲ್ಲಿ ಭಾರತದ ಪಾತ್ರ, ಆರ್ಥಿಕ ಬೆಳವಣಿಗೆಯ ದರದಲ್ಲಿ ಪ್ರಥಮ ಸ್ಥಾನದಲ್ಲಿ ನಿಂತಿರುವ ಭಾರತಕ್ಕೆ ಹರಿದು ಬರುತ್ತಿರುವ ಬಂಡವಾಳ ಹೂಡಿಕೆಗಳು, ವಿಶ್ವದೆಲ್ಲೆಡೆ ಹರಡಿರುವ ಭಾರತೀಯ ಮೂಲದ ಜನರಲ್ಲಿ ಮಾತೃದೇಶದ ಕುರಿತು ಹೆಚ್ಚುತ್ತಿರುವ ಪ್ರೀತಿ ಇವನ್ನೆಲ್ಲ ಗಮನಿಸಿದಾಗ ವಿಶ್ವದ ದೊಡ್ಡಣ್ಣನಾಗಿ ಮೆರೆಯುತ್ತಿರುವ ಅಮೇರಿಕ ಮತ್ತು ಅದರೊಂದಿಗೆ ಪೈಪೋಟಿಗಿಳಿದಿರುವ ಚೀನಾ ದೇಶಗಳ ಮಧ್ಯ ಮುನ್ನಡೆಯುತ್ತಿರುವ ಶಕ್ತಿಯಾಗಿ (ಟeಚಿಜiಟಿg ಠಿoತಿeಡಿ) ಭಾರತ ರೂಪುಗೊಳ್ಳುತ್ತಿರುವುದು ಗೋಚರವಾಗುತ್ತದೆ.

ಆರಂಭದ ಹೆಜ್ಜೆಗಳು
     ಹೊಸ ಸರ್ಕಾರದ ಪ್ರಮಾಣವಚನ ಸಮಾರಂಭಕ್ಕೆ ಸಾರ್ಕ ದೇಶದ ಪ್ರಮುಖರಿಗೆ ಆಹ್ವಾನ ತನ್ಮೂಲಕ ನೆರೆ ಹೊರೆಯ ಸಂಬಂಧ ವರ್ಧನೆಗೆ ನಾಂದಿ. ಪ್ರಧಾನಿಯಾದ ಬಳಿಕೆ ಮೊದಲ ವಿದೇಶಿ ಯಾತ್ರೆಗಾಗಿ ಭೂತಾನ್ ದೇಶದ ಪ್ರವಾಸ ಕೈಗೊಂಡಿದ್ದು ದಕ್ಷಿಣ ಏಷಿಯಾ ದೇಶಗಳ ನೇತೃತ್ವ ವಹಿಸುವ ಭಾರತದ ಇರಾದೆಯನ್ನು ತೋರಿಸುತ್ತದೆ. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಭಾಂಗ್ಲಾದೇಶದ ಗಡಿವಿವಾದ ಮತ್ತು ವಸತಿಗಳ ವಿನಿಮಯ ವಿವಾದವನ್ನು ಬಗೆಹರಿಸಿದ್ದು ಮಹತ್ವದ್ದಾಗಿದೆ.

ವಿಶ್ವದಲ್ಲಿ ಭಾರತೀಯ ವಿಚಾರಗಳಿಗೆ ಮನ್ನಣೆ
      ಮಾಹಿತಿ ತಂತ್ರಜ್ಞಾನದಲ್ಲಿ ಭಾರತ ಮುಂಚೂಣಿಯಲ್ಲಿರುವಂತೆಯೇ, ಯೋಗ, ಆಯುರ್ವೇದಗಳಿಗೆ ವೈಶ್ವಿಕ ಮನ್ನಣೆ ದೊರೆತಿದೆ. ಪ್ರಧಾನಿ ಮೋದಿ  ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತ ಜೂನ್ ೨೧ರಂದು ಅಂತರಾಷ್ಟ್ರೀಯ ಯೋಗ ದಿನದ ಆಚರಣೆ ಮಾಡುವ ಪ್ರಸ್ತಾಪಕ್ಕೆ ನೂರೈವತ್ತಕ್ಕೂ ಹೆಚ್ಚು ದೇಶಗಳು ಬೆಂಬಲ ಸೂಚಿಸಿದ್ದು ಕಳೆದ ವರ್ಷ ವಿಶ್ವದೆಲ್ಲಡೆ ಯೋಗದ ವಾತಾವರಣ ಹರಡಿದೆ. ಅದಕ್ಕಿಂತ ಇಮ್ಮಡಿ ಉತ್ಸಾಹ ಈ ವರ್ಷವೂ ಕಾಣುತ್ತಿದೆ. ಹಾಗೆಯೇ ಹೆಚ್ಚು ಹೆಚ್ಚು ವಿದೇಶೀ ಮೂಲದ ಜನರು ಭಾರತೀಯ ಜೀವನಶೈಲಿಯತ್ತ ಆಕರ್ಷಿತರಾಗುತ್ತಿದ್ದಾರೆ.
        ಭಯೋತ್ಪಾದನೆ ವಿಷಯದಲ್ಲಿ ದೃಢವಾದ ಕ್ರಿಯಾತ್ಮಕ ಅಭಿಪ್ರಾಯ  ರೂಪಿಸುವುದು, ಹವಾಮಾನ ಬದಲಾವಣೆ, ಸೈಬರ್ ಅಪರಾಧಗಳು, ನ್ಯೂಕ್ಲಿಯರ್ ಎನರ್ಜಿ  ವಿಷಯಗಳ ನೀತಿರೂಪಿಸುವಲ್ಲಿ  ಸಕ್ರಿಯ ಪಾತ್ರ ವಹಿಸಿದುದು, ವಿಶ್ವಸಂಸ್ಥೆಯ ಸುಧಾರಣೆಗಳು, ವಿಶ್ವ ವ್ಯಾಪಾರ ಸಂಸ್ಥೆ (Wಖಿಔ) ಮಾತಕತೆ ಮುಂತಾದ ವಿಷಯಗಳಲ್ಲಿ ಭಾರತ ಪ್ರಮುಖ ಧ್ವನಿಯಾಗಿ ಹೊರಹೊಮ್ಮಿದೆ.
     ಸೋಲಾರ ಶಕ್ತಿಯ ಬಳಕೆಯ ಕುರಿತು ಸಂಶೋಧನೆ ನಡೆಸುವ ನೂರಕ್ಕೂ ಹೆಚ್ಚು ದೇಶಗಳು ಹಾಗೂ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಸದಸ್ಯರಾಗಿರುವ ಗುಂಪಿಗೆ ಭಾರತ ನೇತೃತ್ವ ವಹಿಸಿದೆ.
ಅಪಘಾನಿಸ್ತಾನ, ಬಾಂಗ್ಲಾದೇಶ, ಮಂಗೋಲಿಯ, ನೇಪಾಳ, ಭೂತಾನ್ ಮುಂತಾದ ನೆರೆ ಹೊರೆಯ ದೇಶಗಳ ಅಭಿವೃದ್ಧಿಯಲ್ಲಿ ನೆರವಾಗುವ ಮೂಲಕ ಪ್ರಾದೇಶಿಕ ಅಭಿವೃದ್ಧಿಗೆ ಒತ್ತು ನಿಡಿದೆ.

ವಿವಿಧ ದೇಶಗಳ ಸಂಬಂಧ ಮತ್ತು ಸಹಕಾರದಲ್ಲಿ  ಪ್ರಗತಿ
      ಭಾರತ ಸರ್ಕಾರದ ಸಕ್ರಿಯ ವಿದೇಶೀ ನೀತಿಯಿಂದಾಗಿ ವಿವಿಧ ದೇಶಗಳ ಸಖ್ಯದಲ್ಲಿ ಲಾಭವಾಗಿದ್ದು ಕೇವಲ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಮಾತ್ರವಲ್ಲ ರಕ್ಷಣೆ, ಮಿಲಿಟರಿ ಸಹಕಾರ, ಸಾಮಾಜಿಕ ಅಭಿವೃದ್ಧಿಯ ವಿಷಯಗಳಲ್ಲೂ ಗಣನೀಯ ಅನುಕೂಲವಾಗಿದೆ.
        ವ್ಯಾಪಾರಿ ಜಗತ್ತಿನಲ್ಲಿ ಭಾರತದ ಬಗ್ಗೆ ಧನಾತ್ಮಕ ಧೋರಣೆ ಬೆಳೆದ ಪರಿಣಾಮ ವಿದೇಶೀ ನೇರ ಬಂಡವಾಳದ ಹೂಡಿಕೆಯ ಹರಿವು ಹೆಚ್ಚಾಗಿದ್ದು ಇಂದು ಭಾರತ ಅತಿಹೆಚ್ಚು ವಿದೇಶೀ ಬಂಡವಾಳ ಹೂಡಿಕೆಯಾಗುವ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಂತಿದೆ. ಹಾಗೆಯೇ ಆರ್ಥಿಕ ಅಭಿವೃದ್ಧಿ ದರದಲ್ಲಿ ಅತಿಹೆಚ್ಚು ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ.
ಜಪಾನ್ ದೇಶ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ವೇ ಯೋಜನೆ ಸೇರಿದಂತೆ ಅಪಾರ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಹಾಗೆಯೇ ಫ್ರಾನ್ಸ್ ಸ್ಮಾರ್ಟ ಸಿಟಿಗಳ ನಿರ್ಮಾಣದಲ್ಲಿ ಸಹಕಾರ ನೀಡಲಿದೆ. ಅಮೇರಿಕ ದೇಶದೊಂದಿಗೆ ರಕ್ಷಣಾ ಸಂಭಂಧಿತ ವ್ಯವಹಾರದಲ್ಲಿ ವೇಗದಲ್ಲಿ ಪ್ರಗತಿಯಾಗಿತ್ತಿದ್ದು ಪರಿಣಾವಾಗಿ ಹಿಂದೂ ಮಹಾಸಾಗರ ಮತ್ತು ಸುತ್ತಲಿನ ಪ್ರದೇಶದ ರಕ್ಷಣೆಯ ವಿಷಯದಲ್ಲಿ ಭಾರತ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಲಿದೆ. ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ಭಾರತದಲ್ಲಿ ಯುದ್ಧ ವಿಮಾನಗಳನ್ನು ತಯಾರಿಸಲು ಬೋಯಿಂಗ್ ಮುಂತಾದ ಸಂಸ್ಥೆಗಳು ಮಾತುಕತೆ ನಡೆಸಿವೆ. ಭಾರತದ ಸಾಂಸ್ಕೃತಿಕ ಪ್ರಭಾವಕ್ಕೊಳಗಾಗಿರುವ ಪೂರ್ವದ ದೇಶಗಳ ಸಂಭಂಧ ಇನ್ನೂ ನಿಕಟವಾಗಿದೆ.
         ಇತ್ತೀಚೆಗೆ ಅಪಘಾನಿಸ್ತಾನ್ ಭೇಟಿ ನೀಡಿದ ಮೋದಿ ಹೇರತ್ ಪ್ರದೇಶದಲ್ಲಿ ಭಾರತದ ಸಹಕಾರದಲ್ಲಿ ನಿರ್ಮಿಸಿದ ಸಲ್ಮಾ ಅಣೆಕಟ್ಟನ್ನು ಅಪಘಾನಿಸ್ತಾನಕ್ಕೆ ಅರ್ಪಿಸಿದರು. 42ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿರುವ ಈ ಅಣೆಕಟ್ಟು ೭೫ ಸಾವಿರ ಹೆಕ್ಟೇರಿನಷ್ಟು ಭೂಮಿಯನ್ನು ನೀರಾವರಿಗೆ ತರುತ್ತದೆ. ಹಾಗೆಯೇ ಇರಾನ್ ಪ್ರವಾಸದ ವೇಳೆ ಚಬಹರ್ ಬಂದರನ್ನು ಅಭಿವೃದ್ಧಿಪಡಿಸುವ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದರು ಈ ಬಂದರು ಅಪಘಾನಿಸ್ತಾನಕ್ಕೆ ಇರಾನಿನ ಮುಖಾಂತರ ಸಮುದ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ ಹಾಗೆಯೇ ಭಾರತಕ್ಕೆ ಮಧ್ಯ ಏಷಿಯ ದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ.
       ಪೃಥ್ವಿಯ ಮೇಲೆ ಕ್ಷಿಪಣಿಗಳ ಹರಡುವುದನ್ನು ನಿಯಂತ್ರಿಸುವ ಮಿಸೈಲ್ ಟೆಕ್ನೊಲೊಜಿ ಕಂಟ್ರೋಲ್ ಗ್ರುಪ್‌ನ ಮೂವತ್ತೈದನೇ ಸದಸ್ಯನಾಗಿ ಭಾರತ ಸೇರ್ಪಡೆಯಾಗಿದೆ. ಇದು ಪರಮಾಣು ಇಂಧನವನ್ನು ಪೋರೈಸುವ ನ್ಯೂಕ್ಲಿಯರ್ ಎನರ್ಜಿ ಸಪ್ಲಯರ್ ಸಮೂಹಕ್ಕೆ ಭಾರತ ಸೇರ್ಪಡೆಯಾಗಲು ಹತ್ತಿರವಾದಂತೆ. ಮುಂದುವರೆದು ನ್ಯೂಕ್ಲಿಯರ್ ಸಮೂಹಕ್ಕೆ ಭಾರತವನ್ನು ಸೇರಿಸಕೊಳ್ಳಲು ಅಮೇರಿಕಾ, ರಷಿಯ, ಯುನೈಟೆಡ್ ಕಿಂಗ್‌ಡಮ್, ಮೆಕ್ಸಿಕೋ, ಸ್ವಿಟ್ಜರಲೆಂಡ್ ಮೊದಲಾದ ಅನೇಕ ಸದಸ್ಯ ರಾಷ್ಟ್ರಗಳು ಬೆಂಬಲ ಸೂಚಿಸಿವೆ.


ಭಾರತೀಯ ಮೂಲದ ವಲಸಿಗರು
      2015ರ ಏಪ್ರಿಲ್ ತಿಂಗಳಿನಲ್ಲಿ ಯೆಮೆನ್ ದೇಶದಲ್ಲಿ ಸೌದಿ ಅರೇಬಿಯ ಮತ್ತು ಮಿತ್ರದೇಶಗಳು ಸೈನಿಕ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ನಿರಾಶ್ರಿತರಾದ ಭಾರತೀಯ ಮೂಲದ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಜನರು ಮತ್ತು ನಲವತ್ತೊಂದು ದೇಶಗಳ ಒಂಭೈನೂರಕ್ಕೂ ಹೆಚ್ಚು ಜನರನ್ನು ಭಾರತ ರಕ್ಷಿಸಿತು. ಆಪರೇಶನ್ ರಾಹತ್ ಹೆಸರಿನಲ್ಲಿ   ಯುದ್ಧಪ್ರದೇಶದಿಂದ ಜನರನ್ನು ಸಂರಕ್ಷಿಸುವ ಇಂತಹ ಅಪಾಯಕಾರಿ ಕಾರ್ಯಾಚರಣೆ ಸಡೆಸುವ ಎದೆಗಾರಿಕೆ ತೋರಿದ ಭಾರತೀಯ ಸೇನೆ ವಿಶ್ವದ ಶ್ಲಾಘನೆಗೆ ಪಾತ್ರವಾಯಿತು. ಅಮೇರಿಕ ಹಾಗೂ ಯೂರೋಪಿನ ಬೇರೆ ಬೇರೆ ದೇಶಗಳೂ ತಮ್ಮ ದೇಶದ ನಾಗರಿಕರ ರಕ್ಷಣೆಗಾಗಿ ಭಾರತವನ್ನು ಕೇಳಿಕೊಂಡವು.
       ಅಷ್ಟೇ ಅಲ್ಲದೇ ಪ್ರಪಂಚದ ಯಾವುದೇ ಮೂಲೆಯಲ್ಲಿ ಭಾರತೀಯ ಮೂಲದ ಜನರು ಸಂಕಷ್ಟದಲ್ಲಿದ್ದರು ಅವರ ಸಹಾಯಕ್ಕೆ ವಿದೇಶಾಂಗ ವ್ಯವಹಾರಗಳ ವಿಭಾಗವು ತ್ಚರಿತವಾಗಿ ಹಾಗೂ ಧನಾತ್ಮಕವಾಗಿ ಸ್ಪಂದಿಸಿರುವ ಅನೇಕ ಘಟನೆಗಳು ಮಾಧ್ಯಮದಲ್ಲಿ ವರದಿಯಾಗಿವೆ.
    ಪ್ರಧಾನಿ ಮೋದಿ ಪ್ರತಿಯೊಂದು ದೇಶಕ್ಕೆ ಭೇಟಿ ನೀಡಿದಾಗಲೂ ಅಲ್ಲಿ ನೆಲೆಸಿರುವ ಭಾರತೀಯ ಮೂಲದ ಜನರು ಅಭೂತಪೂರ್ವ ಸ್ವಾಗತ ನೀಡುತ್ತಿದ್ದು ಅವರ ಭಾರತಪ್ರೇಮದಲ್ಲಿ ಹೊಸ ಹುಮ್ಮಸ್ಸು ಕಾಣುತ್ತಿದೆ. 

ವಿದೇಶಾಂಗ ನೀತಿಯ ಚಾಲಕ ಪ್ರಧಾನಿ ನರೇಂದ್ರ ಮೋದಿ
     ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಲವತ್ತಕ್ಕೂ ಹೆಚ್ಚು ಬಾರಿ ವಿದೇಶಿ ಪ್ರವಾಸಗಳನ್ನು ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಂದು ಭೇಟಿಯಲ್ಲೂ ವೈಶ್ವಿಕ ವಾತಾವರಣವನ್ನು ಭಾರತದ ಪರವಾಗಿ ರೂಪಿಸಲು ಗಮನವನ್ನು ಕೇಂದ್ರಿಸಿದ್ದಾರೆ. ಪ್ರತಿ ಬಾರಿಯ ವಿದೇಶಿ ಪ್ರವಾಸದಲ್ಲೂ ಮೂರು ನಾಲ್ಕು ದೇಶಗಳಿಗೆ ಭೇಟಿ ನೀಡುತ್ತಿರುವ ಪ್ರಧಾನಿ ದಿನಪೂರ್ತಿ ಬಿಡುವಿರದ ಕಾರ್ಯಕ್ರಮಗಳಲ್ಲಿ ತೊಡಗುತ್ತಾರೆ. ಅಗತ್ಯವದ್ದರೆ ಮಾತ್ರ ಭೇಟಿ ನೀಡಿದ ದೇಶದಲ್ಲಿ ರಾತ್ರಿ ತಂಗುವ ಮೋದಿ, ಸಮಯ ಉಳಿಸುವ ಸಲುವಾಗಿ ರಾತ್ರಿಯಲ್ಲಿ ಪ್ರಯಾಣ ಮಾಡುತ್ತಾರೆ. ಮಾರಿಶಸ್, ಸಿಚೆಲೆಸ್‌ನಂತಹ ಪುಟ್ಟ ದೇಶಗಳಿಗೂ ಪ್ರಧಾನಿ ಭೇಟಿ ನೀಡಿದರು. ಮಾರ್ಚ ೨೦೧೫ರ ಶ್ರೀಲಂಕಾ ಭೇಟಿ 1982ನಂತರ ಭಾರತದ ಪ್ರಧಾನಿಯ ಮೊದಲ ಶ್ರೀಲಂಕಾ ಪ್ರವಾಸವಾಗಿತ್ತು. 2015 ಏಪ್ರಿಲ್ ತಿಂಗಳ ಕೆನಡಾ ಭೇಟಿ 42 ವರ್ಷಗಳ ನಂತರ ಭಾರತೀಯ ಪ್ರಧಾನಿಯ ಪ್ರವಾಸವಾಗಿತ್ತು.

     ಪ್ರತಿಯೊಂದು ದೇಶಕ್ಕೆ ಭೇಟಿ ನೀಡಿದಾಗಲೂ ಅಲ್ಲಿ ನೆಲೆಸಿರುವ ಭಾರತೀಯ ಮೂಲದ ಜನರನ್ನು ಭೇಟಿಯಾಗಲೂ ಎಂದೂ ಮರೆಯುವುದಿಲ್ಲ. ಅಮೇರಿಕದ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನ ಅಭೂತಪೂರ್ವ ಸ್ವಾಗತದಿಂದ ಹಿಡಿದು ಇತ್ತೀಚೆಗೆ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಕೆಲಸಕ್ಕಾಗಿ ವಲಸೆ ಹೋದ ಕೂಲಿ ಕಾರ್ಮಿಕರೊಂದಿಗೆ ಉಪಹಾರ ಸೇವಿಸುವವ ವರೆಗೆ ಮೋದಿಯವರ ಭಾರತೀಯ ಮೂಲದ ಜನರ ಬಗೆಗಿನ ಕಾಳಜಿ ವ್ಯಕ್ತವಾಗುತ್ತದೆ. 
      ಮೊದಲು ಭಾರತದ ರಾಷ್ಟ್ರಪತಿ, ಪ್ರಧಾನಿ ವಿದೇಶೀ ಯಾತ್ರೆಗೆ ಹೋದಾಗ ಪಾಶ್ಚಾತ್ಯ ಉಡುಗೆಯಾದ ಟೈ ಕೋಟ್‌ಗಳನ್ನು ಅಥವಾ ಬಂದ್‌ಗಲಾವನ್ನು ಧರಿಸುವುದು ಸಾಮಾನ್ಯವಾಗಿತ್ತು. ಆದರೆ ಈ ಪದ್ಧತಿಯನ್ನು ಮುರಿದಿರುವ ಮೋದಿ ವಿದೇಶಿ ನೆಲದಲ್ಲೂ ಭಾರತೀಯ ಉಡುಗಯನ್ನೇ ತೊಡುತ್ತಾರೆ. ಇತ್ತೀಚೆಗೆ ಅಮೇರಿಕಾದ ಕಾಂಗ್ರೆಸ್‌ನಲ್ಲಿ ಭಾಷಣ ಮಾಡುವಾಗಲೂ ಮೋದಿ ಎಂದಿನಂತೆ  ಕುರ್ತಾ ಜಾಕೇಟ್‌ನಲ್ಲಿ ಕಂಗೊಳಿಸಿದರು.

       ಉಪನಿಷತ್ತಿನಲ್ಲ ಹೇಳಿದ ವಸುಧೈವ ಕುಟುಂಬಕಮ್ ಇಡೀ ವಿಶ್ವವೇ ಒಂದು ಕುಟುಂಬ ಎನ್ನುವ ಆದರ್ಶ ಭಾರತದ ವಿದೇಶ ವ್ಯವಹಾರವನ್ನು ನಿರ್ದೇಶಿಸಬೇಕು. ಈ ವಾಕ್ಯವನ್ನು ಪ್ರಧಾನಿ ಮೋದಿ ಅನೇಕ ಬಾರಿ ತಮ್ಮ ಭಾಷಣಗಳಲ್ಲಿ ಹೇಳಿದ್ದಾರೆ. ಜಗದ ಮಾತೆಯಾಗಿದ್ದ ಪ್ರಾಚೀನ ಭಾರತ ಜ್ಞಾನದ ಬೆಳಕನ್ನು ಪ್ರಪಂಚಕ್ಕೆ ನೀಡಿತ್ತು. ಇಂದು ಪ್ರಮುಖ ಶಕ್ತಿಯಾಗಿ ಪುನಃ ಹೊರಹೊಮ್ಮುವತ್ತ ಮುನ್ನಡೆಯತ್ತಿರುವ ಭಾರತ ವಿಶ್ವಶಾಂತಿಯನ್ನು ಸ್ಥಾಪಿಸ ಮಾನವತೆಯ ಪ್ರಗತಿಯನ್ನು ನಿರ್ದೇಸುವತ್ತ ಸಾಗಲಿ.

ಯೋಗದಲ್ಲಿ ಒಂದುಗೂಡಲಿ ವಿಶ್ವ

(ಪುಂಗವ  15/06/2016)      

      ಪ್ರಾಚೀನ ಭಾರತದಲ್ಲಿ ವಿಕಸನಗೊಂಡ ಶಾರೀರಿಕ, ಮಾನಸಿಕ ಹಾಗೂ ಬೌದ್ಧಿಕ ಸಾಧನೆಯ ಒಂದು ಅಭ್ಯಾಸಮಾರ್ಗ ಯೋಗ. ಸಂಸ್ಕೃತಮೂಲದ ಯುಜ್ ಶಬ್ದದಿಂದ ’ಯೋಗ’ ಹುಟ್ಟದೆ. ಈ ಪದಕ್ಕೆ ಒಂದುಗೂಡಿಸುವುದು, ಸೇರಿಸುವುದು, ಐಕ್ಯವಾಗುವುದು, ಒಗ್ಗಟ್ಟಾಗುವುದು ಮೊದಲಾದ ಅರ್ಥವಿದೆ. ಹಿಂದೂ ತತ್ವಶಾಸ್ತ್ರ, ಉಪನಿಷತ್ತುಗಳು, ಸಂಹಿತೆಗಳು, ಬಗವದ್ಗೀತೆ ಮುಂತಾದ ಗ್ರಂಥಗಳಲ್ಲಿ ಯೊಗದ ವಿವರಗಳಿವೆ. ಜೈನ ಹಾಗೂ ಬೌದ್ಧ ಸಾಹಿತ್ಯವಷ್ಟೇ ಅಲ್ಲದೇ ಮಹರ್ಷಿ ಪತಂಜಲಿ ರಚಿಸಿದ ಯೋಗಸೂತ್ರಗಳು, ಹಠಯೋಗ ಪ್ರದೀಪಿಕೆ, ಶಿವಸಂಹಿತೆ ಮೊದಲಾದ ಗ್ರಂಥಗಳು ಯೋಗ ಸಾಧನೆಯ ಕುರಿತು ವಿವರಗಳನ್ನು ನೀಡುತ್ತವೆ. ಪ್ರಾಚೀನ ಕಾಲದಿಂದ ಭಾರತೀಯ ಜನಜೀವನದಲ್ಲಿ ಶರೀರ ಮನೋಬುದ್ಧಿಗಳ ವಿಕಸನದ ಶಿಕ್ಷಣ ಹಾಗೂ ಸಾಧನೆಯ ಅಭ್ಯಾಸ ಪದ್ಧತಿ ಯೋಗವಾಗಿತ್ತು ಎನ್ನುವುದು ಇದರಿಂದ ತಿಳಿಯುತ್ತದೆ. ಜನರ ಆಡುಭಾಷೆಯಲ್ಲಿಯೂ ’ಯೋಗ’ ಎನ್ನುವ ಈ ಪದವು ಎಷ್ಟು ಪ್ರಚಲಿತದಲ್ಲಿದೆ ಎಂದರೆ ಮಾನವ ಪ್ರಯತ್ನ ಮತ್ತು ದೈವಾನುಗ್ರಹ ಒಂದುಗೂಡಿ ಏನೇ ಒಳ್ಳೆಯದಾದರೂ ಎಂತಹ ಸುಯೋಗ, ಆತನ ಯೋಗ ಚೆನ್ನಾಗಿತ್ತು, ಯೋಗಾಯೋಗದಿಂದ ಒಳ್ಳೆಯದಾಯಿತು ಇತ್ಯಾದಿಯಾಗಿ ಹೇಳಲಾಗುತ್ತದೆ. ಅಂದರೆ ಭಾರತೀಯರ ಮಟ್ಟಿಗೆ ಯೋಗದ ಅರ್ಥವ್ಯಾಪ್ತಿ ತುಂಬಾ ವಿಶಾಲವಾಗಿರುವುದು ತಿಳಿಯುತ್ತದೆ.
       ಬೌತಿಕ ಹಾಗೂ ಬೌದ್ಧಿಕ ಸ್ವಾಸ್ಥ್ಯ ಯೋಗಾಭ್ಯಾಸದಿಂದ ಸಿಗುತ್ತದೆ ಎನ್ನುವುದು ಇಂದು ಎಲ್ಲರೂ ಅರಿತಿರುವ ವಿಚಾರ. ಆದರೆ ಯೋಗವೆಂದರೆ ಕೇವಕ ಶಾರೀರಿಕ ಕಸರತ್ತಲ್ಲ. ಸ್ವಸ್ಥ ಸಮಾಜಜೀವವನ್ನು ಸ್ಥಾಪಿಸುವ ಮಾರ್ಗವೂ ಹೌದು. ವ್ಯಕ್ತಿಯ ಶಾರೀರಿಕ ಮಾನಸಿಕ ಆರೋಗ್ಯ ಸರಿ ಇದ್ದರೆ, ಆತನ ಬುದ್ಧಿಗೆ ಸುಸಂಸ್ಕೃತ ಸಂಸ್ಕಾರ ದೊರಕಿದರೆ ತನ್ನಿಂದ ತಾನೆ ಕುಟುಂಬದಲ್ಲಿ ನೆಮ್ಮದಿ ಹಾಗೂ ಉತ್ತಮ ವಾತಾವರಣ ನೆಲೆಸುತ್ತದೆ. ಅಂತಹ ಕುಟುಂಬದ ಪ್ರಭಾವ ನೆರೆಹೊರೆಯಲ್ಲೂ ಹರಡುವುದರ ಮೂಲಕ ಸುಸಂಸ್ಖೃತ ಸಮಾಜ ನೆಲೆಯಾಗಲು ಸಾಧ್ಯವಾಗುತ್ತದೆ. ದೇಶವು ಸ್ವಸ್ಥ ಹಾಗೂ ಸುದೃಢವಾದಾಗ ವಿಶ್ವದಲ್ಲಿ ಶಾಂತಿಯನ್ನು ಸ್ಥಾಪಿಸಲು ನೇತೃತ್ವವಹಿಸಬಲ್ಲದು.


ಈ ಹಿನ್ನೆಲೆಯಲ್ಲಿ ರಾಜಕೀಯ ವೈಶಮ್ಯ, ಜಾತೀಯತೆ, ಮತಾಂಧತೆ, ಭ್ರಷ್ಟಾಚಾರಗಳಲ್ಲಿ ಹಂಚಿರುವ ನಮ್ಮ ಸಮಾಜವನ್ನು ಒಂದುಗೂಡಿಸುವುದು ಯೋಗಮಾರ್ಗದಿಂದ ಸಾಧ್ಯ. ಆರ್ಥಿಕ ವಿಷಮತೆ, ಭಯೋತ್ಪಾದನೆ, ಯುದ್ಧಸನ್ನಾಹದ ಶಸ್ತ್ರಾಸ್ತ್ರ ಸಂಗ್ರಹಣೆಗಳ ಮೂಲಕ ಸದಾ ಒಂದು ರೀತಿಯ ಭಯದ ನೆರಳಲ್ಲಿರುವ ವಿಶ್ವದಲ್ಲಿ ಶಾಂತಿಯನ್ನು ನೆಲೆಸಲು ಅಂತರರಾಷ್ಟ್ರೀಯ ಯೋಗದಿವಸ ಪ್ರೇರಣೆಯಾಗಲಿ. ವಿಶ್ವ ಯೋಗದಲ್ಲಿ ಒಂದುಗೂಡಲಿ.

ಸಮತ್ವವೇ ಯೋಗ 
ಯೋಗಸ್ಥಃ ಕುರು ಕರ್ಮಾಣಿ ಸಂಗಮ್ ತ್ಯಕ್ತ್ವಾ ಧನಂಜಯ| 
ಸಿದ್ಧಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಮ್ ಯೋಗ ಉಚ್ಯತೇ||   ...... ಶ್ರೀಮದ್ ಭಗವದ್ಗೀತೆ
ಕರ್ಮಫಲದ ಆಸಕ್ತಿಯನ್ನು ತ್ಯಜಿಸಿ ಯಶಸ್ಸು ಅಪಯಶಸ್ಸುಗಳನ್ನು ಸಮಾನವಾಗಿ ಸ್ವೀಕರಿಸಿ ಯೋಗ ಮನಸ್ಥಿತಿಯಲ್ಲಿ ನೆಲೆನಿಂತು ಕರ್ತವ್ಯವನ್ನು ನಿರ್ವಹಿಸು. ಎಲ್ಲವನ್ನೂ ಸಮದ್ಥಷ್ಟಿಯಲ್ಲಿ, ಏಕರೀತಿಯಲ್ಲಿ ಕಾಣುವುದೇ ಯೋಗ. 
ಶ್ರೀಕೃಷ್ನನು ಅರ್ಜುನನಿಗೆ ರಣಾಂಗಣದ ನಟ್ಟನಡುವೆ ಹೇಳಿದಂತೆ ಎಲ್ಲ ತರಹದ ಸನ್ನಿವೇಶದಲ್ಲೂ ಸಮಚಿತ್ತರಾಗಿ ಪ್ರತಿಫಲದ ಬಗ್ಗೆ ಅನಾಸಕ್ತರಾಗಿ ಲಾಭ ನಷ್ಟಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಸಿನಿಂದ ಕೆಲಸ ಮಾಡಬೇಕು. ಹಾಗಾದಾಗ ಬದುಕು ಅರ್ಥಪೂರ್ಣ ಹಾಗೂ ಆನಂದಮಯವಾಗುವುದರಲ್ಲಿ ಸಂಶಯವಿಲ್ಲ. ಅಂತಹ ಮನಸ್ಸಿನ ಸಮತ್ವದ ಸ್ಥಿತಿ ಯೋಗಸಾಧನೆಯಿಂದ ಲಭಿಸುತ್ತದೆ. ಇಂತಹ ಸಮತೋಲಿತ ಜೀವನವೇ ಯೋಗ.

ಮಹರ್ಷಿ ಪತಂಜಲಿ
ಒಂದಾನೊಂದು ಕಾಲದಲ್ಲಿ ಪೃಥ್ವಿಯ ಮೇಲಿನ ಋಷಿಗಳೆಲ್ಲ ಸೇರಿ ಮಹಾವಿಷ್ಣುವಿನ ಬಳಿ ಸಮಸ್ಯೆಯೊಂದನ್ನು ತೆಗೆದುಕೊಂಡು ಹೋದರು. ಮಹಾವಿಷ್ಣುವೇ ಧನ್ವಂತರಿಯ ರೂಪದಲ್ಲಿ ಅವತರಿಸಿ ರೋಗ ರುಜಿನಗಳ ನಿವಾರಣೆಗಾಗಿ ಆಯುರ್ವೇದವನ್ನು ನೀಡಿದರೂ ಜನರು ಮತ್ತೆ ಮತ್ತೆ ಕಾಯಿಲೆಗೆ ಬೀಳುತ್ತಿರುವರು. ಇದಕ್ಕೆ ಪರಿಹಾರವನ್ನು ನೀನೇ ನೀಡಬೇಕುಎನ್ನುವುದು ಅವರ ಅಳಲಾಗಿತ್ತು. ಹಾಗೆಯೇ ಕೇವಲ ಶಾರೀರಿಕ ವ್ಯಾಧಿಗಳಷ್ಟೇ ಅಲ್ಲದೇ, ಮಾನಸಿಕ ಕ್ಲೇಷಗಳು, ಸಿಟ್ಟು, ಅಸೂಯೆ, ಅಹಂಕಾರ, ಮಾತ್ಸರ್ಯ ಮುಂತಾದವುಗಳಿಂದ ಮುಕ್ತಿಯನ್ನು ಪಡೆದು ಶ್ರೇಯಸ್ಸಿನ ಕಡೆ ನಡೆಯುವ ಮಾರ್ಗ ಯಾವುದು ಎನ್ನುವುದು ಅವರ ಹುಡುಕಾಟವಾಗಿತ್ತು. 

ಸಾವಿರ ಹೆಡಗಳ ಆದಿಶೇಷನ ಮೇಲೆ ಮಲಗಿದ್ದ ಮಹಾವಿಷ್ಣುವು ಋಷಿಗಳ ಅಳಲಿಗೆ ಸ್ಪಂದಿಸಿ ಜಾಗೃತ ಪ್ರಜ್ಞೆಯ ಪ್ರತೀಕವಾದ ಆದಿಶೇಷನನ್ನೇ ಭೂಲೋಕಕ್ಕೆ ಕಳುಹಿಸಿಕೊಟ್ಟನು. ಆದಿಶೇಷನೇ ಮಹರ್ಷಿ ಪತಂಜಲಿಯ ರೂಪದಲ್ಲಿ ಅವತರಿಸಿದನು. ಹೀಗೆ ಜನಿಸಿದ ಪತಂಜಲಿಯು ಶರೀರ ಮನೋಬುದ್ಧಿಗಳ ಸರ್ವಾಂಗೀಣ ವಿಕಾಸ ಸಾಧನಾ ಮಾರ್ಗವಾದ ಯೋಗವನ್ನು ನೀಡಿ ಜಗತ್ತನ್ನು ಉದ್ಧರಿಸಿದನು. ಕೇವಲ ಯೋಗಸೂತ್ರಗಳನ್ನಷ್ಟೇ ಅಲ್ಲದೇ ವೈದ್ಯಕೀಯ ಸೂತ್ರದ ಮೂಲಕ ಶರೀರವನ್ನೂ, ವ್ಯಾಕರಣದ ಮೂಲಕ ಭಾಷೆಯನ್ನು ಶುದ್ಧಗೊಳಿಸಿದ ಶ್ರೇಯಸ್ಸು ಮಹರ್ಷಿ ಪತಂಜಲಿಗೆ ಸಲ್ಲುತ್ತದೆ. ಅಂತಹ ಮಹರ್ಷಿ ಪತಂಜಲಿಗೆ ಮಾನವಕುಲ ಸದಾ ಋಣಿಯಾಗಿದೆ.




ಯೋಗೇನ ಚಿತ್ತಸ್ಯ ಪದೇನ ವಾಚಾಮ್, ಮಲಂ ಶರೀರಸ್ಯ ಚ ವೈದ್ಯಕೇನ| 
ಯೋಪಾಕರೋತ್ತಂ ಪ್ರವರಮ್ ಮುನೀನಾಮ್, ಪತಂಜಲಿಮ್ ಪ್ರಾಂಜಲಿರಾನತೋಸ್ಮಿ||

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...