Tuesday, November 11, 2014

ಬಂಗಾಲದ ಭೂಮಿಯಲ್ಲಿ ಇಳಿಯುತ್ತಿವೆ ಭಯೋತ್ಪಾದನೆಯ ಬೇರುಗಳು

(ಪುಂಗವ 15/11/2014)

      ಬರ್ದ್ವಾನ್ ಪಶ್ಚಿಮ ಬಂಗಾಳ ರಾಜ್ಯದ ಅದೇ ಹೆಸರಿನ ಜಿಲ್ಲೆಯ ಜಿಲ್ಲಾಕೇಂದ್ರ. 24ನೇ ಜೈನ ತೀರ್ಥಂಕರ ವರ್ಧಮಾನ ಮಹಾವೀರ ಇಲ್ಲಿ ಕೆಲ ಕಾಲ ತಂಗಿದ್ದ ನೆನಪಿಗಾಗಿ ಬರ್ಧಮಾನ ಎಂಬ ಹೆಸರು ಹೊತ್ತು ಬ್ರಿಟಿಷರ ಕಾಲದಲ್ಲಿಬರ್ದ್ವಾನ್’ ಆಗಿ ಬದಲಾದ ನಗರಕ್ಕೆ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದೆ. ಇದೇ ಬರ್ದ್ವಾನ್ನ ಖಾಗ್ರಾಘರ್ ಪ್ರದೇಶದಲ್ಲಿ ಕಳೆದ ಅಕ್ಟೋಬರ್ 2ರಂದು ನಡೆದ ಬಾಂಬ್ ಸ್ಫೋಟ ಬಂಗಾಲದ ನೆಲದಲ್ಲಿ ಕಳೆದ ಹಲವಾರು ವರ್ಷಗಳಿಂದ ಬೇರುಬಿಡುತ್ತಿರುವ ಇಸ್ಲಾಮೀ ಭಯೋತ್ಪಾದನೆಯ ಎಳೆಗಳನ್ನು ಹೊರಹಾಕಿದೆ.

ಹಿನ್ನೆಲೆ
      ಬರ್ದ್ವಾನ್ನ ಖಾಗ್ರಾಘರ್ ಪ್ರದೇಶದಲ್ಲಿ ನುರುಲ್ ಹಸನ್ ಚೌಧರಿ ಎಂಬ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕನಿಗೆ ಸೇರಿದ ಎರಡಂತಸ್ತಿನ ಕಟ್ಟಡದಲ್ಲಿ ಕಳೆದ ಅಕ್ಟೋಬರ್ 2ರಂದು ಸಂಭವಿಸಿದ ಸ್ಫೋಟದಲ್ಲಿ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ಮೃತಪಟ್ಟು ಇನ್ನೊಬ್ಬನಿಗೆ ಗಂಭೀರ ಗಾಯಗಳಾದವು. ನಂತರ ನಡೆದ ಪೋಲೀಸ್ ತನಿಖೆಯಲ್ಲಿ 50ಕ್ಕೂ ಹೆಚ್ಚು ಬಾಂಬ್‍ಗಳು(IED), ದೊಡ್ಡ ಪ್ರಮಾಣದ ಆರ್‍ಡಿಎಕ್ಸ್, ಕೈಗಡಿಯಾರದ ಡಯಲ್‍ಗಳು, ಸಿಮ್ ಕಾರ್ಡ, ನಕಾಶೆಗಳು, ಮೆಮರಿ ಕಾರ್ಡಗಳು, ನಕಲಿ ಪಾಸ್‍ಪೋರ್ಟ, ಮತದಾರರ ಗುರತಿನ ಪತ್ರ, ಅಲ್‍ಕೈದಾ ಮೊದಲಾದ ಇಸ್ಲಾಮೀ ಸಂಘಟನೆಗಳ ವೀಡಿಯೋ, ಕರಪತ್ರ ಮುಂತಾದವುಗಳನ್ನು ವಶಪಡಿಸಿಕೊಳ್ಳಲಾಯಿತು. ಪೋಲೀಸರಿಗೆ ಬಂದೂಕು ತೋರಿಸಿ ತನಿಖೆಗೆ ಅಡ್ಡಿಪಡಿಸಿ ದಾಖಲೆಗಳನ್ನು ನಾಶಪಡಿಸುವ ಯತ್ನ ಮಾಡಿದ ಉಗ್ರರ ಪತ್ನಿಯರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.

      ಇದೇ ಕಟ್ಟಡದ ನೆಲೆಮಹಡಿ ಚುನಾವಣೆಯ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಾಲಯವಾಗಿತ್ತು. ಇಂಡಿಯನ್ ಮುಜಾಹಿದ್ದೀನ್‍ನ ಉಗ್ರ ಶಕೀಲ್ ಅಹ್ಮದ್ ಇದನ್ನು ಬಾಡಿಗೆಗೆ ಪಡೆದಿದ್ದು ಇಲ್ಲೊಂದು ಬಾಂಬ್ ತಯಾರಿಕಾ ಕಾರ್ಖಾನೆ ಕಾರ್ಯನಿರ್ವಹಿಸುತ್ತಿತ್ತು.


ಬಾಂಗ್ಲಾದೇಶದ ಜಮಾತ-ಉಲ್-ಮುಜಾಹಿದ್ದೀನ್ ನಂಟು
      ಬರ್ದ್ವಾನ್ ಸ್ಪೋಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾದಳ (NIA) ನಡೆಸುತ್ತಿರುವ ತನಿಖೆಯಿಂದ ಹೊರಬರುತ್ತಿರುವ ತಥ್ಯಗಳು ಪಶ್ಚಿಮ ಬಂಗಾಳದಲ್ಲಿ ಇಸ್ಲಾಮೀ ಮೂಲಭೂತವಾದ ಆತಂಕಕಾರಿ ಬೆಳವಣಿಗೆ ಮತ್ತು ರಾಜಕೀಯ ಲಾಭಕ್ಕಾಗಿ ದೇಶದ ಸುರಕ್ಷತೆಯನ್ನೆ ಬಲಿಕೊಡುವ ರಾಜ್ಯದ ಅಪ್ರಬುದ್ಧ ನಾಯಕತ್ವದ ಧೋರಣೆಯನ್ನು ಬಿಚ್ಚಿಡುತ್ತಿದೆ. ಬಾಂಗ್ಲಾದೇಶದ ಜಮಾತ್--ಇಸ್ಲಾಮಿ ಸಂಘಟನೆಯ ಭಯೋತ್ಪಾದಕ ಅಂಗವಾಗ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶದ (JMB) ಉಗ್ರ ಚಟುವಟಿಕೆಗಳಿಗೆ ಪಶ್ಚಿಮ ಬಂಗಾಲದ ಬದ್ರ್ವಾನ್, ಬಿರ್ಭುಮ್ ಮತ್ತು ಮುರ್ಶಿದಾಬಾದ್ ಜಿಲ್ಲೆಗಳಿಂದ ಸ್ಫೋಟಕಗಳ ಪೋರೈಕೆಯಾಗುತ್ತಿತ್ತು ಎಂದು ಕಂಡುಬಂದಿದೆ. ಅಂದರೆ ಬಾಂಗ್ಲಾದೇಶದ ಪ್ರಸಕ್ತ  ಶೇಖ್ ಹಸೀನಾ ನೇತೃತ್ವದ ಆವಾಮಿ ಲೀಗ್ ಸರ್ಕಾರದ ಕಠಿಣ ನಿರ್ಧಾರಗಳಿಂದ ಉಗ್ರ ಚಟುವಟಿಕೆಗಳಿಗೆ ಹಿನ್ನೆಡೆಯಾದಾಗ ಪಶ್ಚಿಮ ಬಂಗಾಳವನ್ನು ತಮ್ಮ ಕಾರಸ್ಥಾನವನ್ನಾಗಿ ಮಾಡಿಕೊಂಡು ಬಾಂಗ್ಲಾದೇಶದ ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ ನಡೆದದ್ದು ಸ್ಫಷ್ಟವಾಗುತ್ತದೆ. 2013ರಲ್ಲಿ ಪಶ್ಚಿಮ ಬಂಗಾಳ ರಾಜ್ಯದಲ್ಲಿ  9000ಕ್ಕೂ ಹೆಚ್ಚು ಬಾಂಬ್‍ಗಳನ್ನು ಮತ್ತು 2285ಕೆಜಿಯಷ್ಟು ಆರ್‍ಡಿಎಕ್ಸ್‍ನ್ನು ವಶಪಡಿಸಿಕೊಳ್ಳಲಾಗಿದ್ದು ಅವುಗಳಲ್ಲಿ 80ಪ್ರತಿಶತ ಬರ್ದ್ವಾನ್, ಬಿರ್ಭುಮ್ ಮತ್ತು ಮುರ್ಶಿದಾಬಾದ್ ಜಿಲ್ಲೆಗಳಲ್ಲಿ ದೊರಕಿವೆ. ತನಿಖೆಗೆ ಸಂಬಂಧಿಸಿದಂತೆ ಬದ್ರ್ವಾನಿನ ಸಿಮುಲಿಯಾದ ಹೆಣ್ಣುಮಕ್ಕಳ ಮದರಸಾವನ್ನು ಹುಡುಕಾಡಿದಾಗ ಅಲ್ಲಿ ಬಾಂಬ್‍ಗಳನ್ನು ಜೋಡಿಸಲಾಗುತ್ತಿತ್ತೆಂಬುದು ಕಂಡುಬಂದಿದೆ.

ಶಾರದಾ ಚಿಟ್‍ಫಂಡ, ಜಮಾತ ಮತ್ತು ಮಮತಾ ಬ್ಯಾನರ್ಜಿ
      ಬಡ ಮತ್ತು ಮಧ್ಯಮ ವರ್ಗದ ಆದಾಯವುಳ್ಳ ಸುಮಾರು 17ಲಕ್ಷ ಹೂಡಿಕೆದಾರರಿಗೆ ಪಂಗನಾಮ ಹಾಕಿದ ಸುಮಾರು 5000ಕೋಟಿ ರೂಪಾಯಿಗಳ ಶಾರದಾ ಚಿಟ್ ಫಂಡ್ ಹಗರಣ ರಾಷ್ಟ್ರವ್ಯಾಪಿ ಚರ್ಚೆಯಾಗಿದೆ. ಆದರೆ ಶಾರದಾ ಹಗರಣದಿಂದ ಗಳಿಸಿದ ಹಣ ಜಮಾತ-ಉಲ್-ಮುಜಾಹಿದ್ದೀನ ಉಗ್ರಚಟುವಟಿಕೆಗಳಿಗೆ ರವಾನೆಯಾಗಿದೆ ಎಂಬ ವಿಷಯವನ್ನು ಬಂಗಾಲದ ಪ್ರಸಿದ್ಧ ಆನಂದಬಾಜಾರ್ ಪತ್ರಿಕೆ ವರದಿ ಮಾಡಿದೆ. ತೃಣಮೂಲ ಕಾಂಗ್ರೆಸ್ ಮುಖಂಡ ಸುದಿಪ್ತೋ ಸೇನ್‍ಗೆ ಸೇರಿದ ಶಾರದಾ ಗ್ರುಪ್‍ನ ಚಿಟ್‍ಫಂಡ್ ಹಣವನ್ನು ಬಾಂಗ್ಲಾದೇಶಕ್ಕೆ ಸಾಗಿಸುವ ಕೆಲಸವನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಅಹ್ಮದ್ ಹಸನ್ ಇಮ್ರಾನ ನಿರ್ವಹಿಸರುವುದನ್ನು ಪತ್ರಿಕೆ ವರದಿ ಮಾಡಿದೆ. ವಿದ್ಯಾರ್ಥಿ ದೆಸೆಯಲ್ಲಿ ನಿಷೇಧಿತ ಸಂಘಟನೆ ಸಿಮಿಯ ಕಾರ್ಯಕರ್ತ ಮತ್ತು ಅಧ್ಯಕ್ಷನೂ ಆಗಿದ್ದ ಅಹ್ಮದ್ ಹಸನ್ ಬಾಂಗ್ಲಾದೇಶದ ಜಮಾತ ಜೊತೆ ನಿಕಟ ಸಂಬಂಧವನ್ನು ಹೊಂದಿದ್ದಾನೆ. ಹಸನ್ ಸಂಪಾದಕನಾಗಿರುವ ಬಂಗಾಲಿ ದಿನಪತ್ರಿಕೆದೈನಿಕ್ ಕಲಮ್ಜಿಹಾದಿ ಸಂದೇಶವನ್ನು ಹರಡವಲ್ಲಿ ನಿರತವಾಗಿದೆಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಆಪ್ತನಾಗಿರುವ ಅಹ್ಮದ್ ಹಸನ್ ಪಕ್ಷದ ಟಿಕೆಟ್ ಮೇಲೆ ರಾಜ್ಯಸಭಾ ಸದಸ್ಯನಾಗಿ ಆಯ್ಕೆಯಾಗಿದ್ದಾನೆ. ಜೊತೆಗೆ ಬಾಂಗ್ಲಾದೇಶದ ಜಮಾತ್ ಸಂಘಟನೆ 2011 ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್‍ನ ವೆಚ್ಚಕ್ಕಾಗಿ ಧನಸಹಾಯ ಮಾಡಿತ್ತು ಎಂಬ ಗಂಭೀರ ಮಾಹಿತಿಯು ವರದಿಯಾಗಿದೆ. ಬದ್ರ್ವಾನ ಸ್ಫೋಟದ ತನಿಖೆಯಲ್ಲಿ ರಾಜ್ಯ ಸರ್ಕಾರವು ತನಿಖೆಗೆ ಅಸಹಕಾರ ನೀಡುತ್ತಿರುವುದರ ಜೊತೆಗೆ ರಾಷ್ಟ್ರೀಯ ತನಿಖಾದಳದ ತನಿಖೆಯನ್ನು ವಿರೋಧಿಸಿದೆ. ರಾಜ್ಯದ ಭಯೋತ್ಪಾದಕ ಸೆಲ್‍ಗಳು, ಗಡಿಯಲ್ಲಿ ಹೆಚ್ಚುತ್ತಿರುವ ಬಾಂಗ್ಲಾದೇಶೀಯರ ಒಳನುಸುಳುವಿಕೆ, ದಿನೇ ದಿನೇ ಹೊರಬರುತ್ತಿರವ ಸ್ಫೊಟಕ ಮಾಹಿತಿಗಳ ವಿಷಯದಲ್ಲಿ ಮೌನ ವಹಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಯವರು, ಭಾರತೀಯ ಜನತಾ ಪಾರ್ಟಿ ಮತ್ತು ಕಮ್ಯುನಿಸ್ಟ್ ಪಕ್ಷಗಳು ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ ಎಂದು ಎಂದು ದೂರಿದ್ದಾರೆ. ಇವುಗಳನ್ನು ಗಮನಿಸಿದರೆ ಪಶ್ಚಿಮ ಬಂಗಾಳ ಸರ್ಕಾರ ಉಗ್ರರನ್ನು ರಕ್ಷಿಸುತ್ತಿದೆಯೇ? ಬಾಂಗ್ಲಾದೇಶ ವಿರೋಧಿ ಉಗ್ರ ಸಂಘಟನೆಗಳನ್ನು ಪೋಷಿಸುತ್ತಿದೆಯೇ? ಎಂಬ ಸಂದೇಹ ಬರುವುದರ ಜೊತೆಗೆ, ತೃಣಮೂಲ ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕಾಗಿ ದೇಶದ ಸುರಕ್ಷೆಯನ್ನೇ ಬಲಿಕೊಡಲು ಮುಂದಾಯಿತೇ? ಎಂಬ ಸಂಶಯ ಸಹಜವಾಗಿ ಮೂಡುತ್ತದೆ.

ಬೃಹತ್ ಬಾಂಗ್ಲಾದೇಶದ ಸ್ಥಾಪನೆಯೇ ಗುರಿ
      ಬರ್ದ್ವಾನ್ ಸ್ಫೋಟಕ್ಕೆ ಸಂಬಂಧಿಸಿದಂತೆ ಭಾರತ ಬಾಂಗ್ಲಾದೇಶ ಸರ್ಕಾರಕ್ಕೆ ನೀಡಿದ ಕಡತದಲ್ಲಿ ಪಶ್ಚಿಮ ಬಂಗಾಳವನ್ನು ಬಾಂಗ್ಲಾದೇಶದಲ್ಲಿ ವಿಲೀನಗೊಳಿಸಿ ಬೃಹತ್ ಬಾಂಗ್ಲಾದೇಶವನ್ನು ಸ್ಥಾಪಿಸುವುದು ಉಗ್ರ ಸಂಘಟನೆಗಳ ಗುರಿ ಎಂದು ಹೇಳಿದೆ. ಇದರ ಮೊದಲ ಹೆಜ್ಜೆಯೇ ಪಶ್ಚಿಮ ಬಂಗಾಳ, ಆಸ್ಸಾಂ ಮತ್ತು ಮೇಘಾಲಯ ರಾಜ್ಯಗಳಲ್ಲಿ ಉಗ್ರಗಾಮಿ ಸೆಲ್‍ಗಳನ್ನು ಆರಂಭಿಸಿ ಅನೇಕ ಮಿನಿ ಬಾಂಗ್ಲಾದೇಶಗಳನ್ನು ಸ್ಥಾಪಿಸುವುದು. ಬಾಂಗ್ಲದೇಶದ ಬಂದರ್‍ಬನ್ ಮತ್ತು ಚಿತಗೊಂಗ್‍ಗಳಲ್ಲಿರುವ ಜಮಾತ್-ಉಲ್-ಮುಜಾಹಿದ್ದೀನಿನ ಕ್ಯಾಂಪ್‍ಗಳನ್ನು ಭಾರತದಲ್ಲಿ ಭಯೋತ್ಪಾದಕತೆಯನ್ನು ಬೆಳೆಸಲು ಲಾಂಚ್ ಪ್ಯಾಡ್‍ಗಳನ್ನಾಗಿ ಬಳಸಲಾಗುತ್ತಿದೆ. ಬಾಂಗ್ಲಾದೇಶದ ಅನ್ಸಾರುಲ್ಲಾ ಬಾಂಗ್ಲಾ, ಜಮಾಯತುಲ್ ಮುಸ್ಲಿಮೀನ್, ಹೆಪಾಜತ್ ಇಸ್ಲಾಮ್, ತಂಜಿಮ್ ತಮಿರುದ್ದೀನ ಮುಂತಾದ ಸಂಘಟನೆಗಳು ಜಮಾತ್‍ನ ಕೆಲಸದಲ್ಲಿ ಸಹಕಾ ನೀಡುತ್ತಿವೆ ಎಂದು ಭಾರತ ಬಾಂಗ್ಲಾ ಸರ್ಕಾರಕ್ಕೆ ತಿಳಿಸಿದೆ. ಅಲ್ಲದೇ ಜಮಾತ್ ಬೃಹತ್ ಬಾಂಗ್ಲಾದೇಶದ ಸಾಕಾರಕ್ಕಾಗಿ ಅಲ್‍ಕೈದಾ ಮೊದಲಾದ ಸಂಘಟನೆಗಳೊಡನೆ ಕೈಜೋಡಿಸುತ್ತಿದೆ.

       ಭಾರತದ ಪರವಾಗಿರುವ ಶೇಖ ಹಸೀನಾ ನೇತೃತ್ವದ ಬಾಂಗ್ಲಾದೇಶದ ಪ್ರಸಕ್ತ ಸರ್ಕಾರ ಭಯೋತ್ಪಾದಕ ಸಂಘಟನೆಗಳನ್ನು ಮಟ್ಟ ಹಾಕಲು ಎಲ್ಲ ಸಹಕಾರಗಳನ್ನು ನೀಡಲು ಸಿದ್ಧವಾಗಿರುವಾಗಲೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸ್ವಾರ್ಥ, ಮತಬ್ಯಾಂಕ್ ರಾಜಕೀಯ ಮತ್ತು ಮೊಂಡುತನದಿಂದಾಗಿ ಪಶ್ಚಿಮ ಬಂಗಾಳ ಇಸ್ಲಾಮೀ ಉಗ್ರರ ಕಾರಸ್ಥಾನವಾಗಿ ಬದಲಾಗುತ್ತಿದೆ. ಎರಡೂ ದೇಶಗಳ ರಾಷ್ಟ್ರೀಯ ಸುರಕ್ಷೆಗೆ ಕಂಟಕವಾಗಿರುವ ಜಮಾತ್‍ನಂತಹ ಭಯೋತ್ಪಾದಕ ಸಂಘಟನೆಗಳನ್ನು ಮಟ್ಟಹಾಕಲು ಸರ್ಕಾರಗಳ ನಡುವೆ ಸಹಕಾರ ಅನಿವಾರ್ಯವಾಗಿದೆ. ಹಾಗೆಯೇ ರಾಜಕೀಯ ಲಾಭದ ಲೆಕ್ಕಾಚಾರದಿಂದ ಹೊರಬಂದು ದೇಶದ ಸುರಕ್ಷೆಯ ಮಹತ್ವವನ್ನು ಅರಿಯುವುದನ್ನು ಮಮತಾರಂತಹ ರಾಜಕೀಯ ನಾಯಕರು ರೂಢಿಸಿಕೊಳ್ಳಬೇಕಾಗಿದೆ.

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...