Monday, November 25, 2013

ಒಡಿಶಾ ಸಂತ್ರಸ್ತರ ಬದುಕಿನಲ್ಲಿ "ಚಂಡಮಾರುತ"

(ಪುಂಗವ: 1/12/2013)

ಫೈಲಿನ್ ಚಂಡಮಾರುತದ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ಕರಾವಳಿ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದ್ದರಿಂದ ಹೆಚ್ಚಿನ ಸಾವು ನೋವು ಸಂಭವಿಸಿಲ್ಲವೆನ್ನುವುದು ನಿಜವಾದರೂ ತಮ್ಮ ಮನೆ ಆಸ್ತಿಗಳನ್ನು ಕಳೆದುಕೊಂಡ ಸಂತ್ರಸ್ತರು ತಮ್ಮ ಬದುಕನ್ನು ಪುನ: ಕಟ್ಟಿಕೊಳ್ಳಲು ಪರದಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಸಾವು ನೋವಿನ ಸಂಖ್ಯೆಯನ್ನೇ ನೈಸರ್ಗಿಕ ವಿಪತ್ತಿನ ತೀವ್ರತೆಯ ಮಾನದಂಡವಾಗಿಸಿಕೊಂಡಿರುವ ಮಾನಸಿಕತೆಯಿಂದಾಗಿ ಹಾನಿಯ ನಿಜವಾದ ಗಣನೆಯಾಗದೇ ಅಗತ್ಯ ನೆರವು ಸಂತ್ರಸ್ತರನ್ನು ತಲುಪುತ್ತಿಲ್ಲ ಮತ್ತು ಪುನರ್ವಸತಿ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿವೆ.


ಕಳೆದ ಅಕ್ಟೋಬರ ತಿಂಗಳಲ್ಲಿ ಪ್ರತಿಘಂಟೆಗೆ 260ಕೀಮೀ ವೇಗದಲ್ಲಿ ಪೂರ್ವಕರಾವಳಿಯನ್ನು ಅಪ್ಪಳಿಸಿದ ಫೈಲಿನ್ ಚಂಡಮಾರುತದ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಚಂಡಮಾರುತದ ಪ್ರಭಾವವಿರುವ ಒಡಿಶಾ ಮತ್ತು ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಿಂದ ಹಿಂದೆಂದೂ ನಡೆದಿರದ ರೀತಿಯಲ್ಲಿ ಬೃಹತ್ ಪ್ರಮಾಣದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು. ಸಂತ್ರಸ್ತರಿಗಾಗಿ ಸಾವಿರಕ್ಕೂ ಹೆಚ್ಚು ಕ್ಯಾಂಪಗಳಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಸರ್ಕಾರಿ ವ್ಯವಸ್ಥೆ ಮತ್ತು ಸರ್ಕಾರೇತರ ಸಂಘಟನೆಗಳು ನಿರ್ವಹಣೆಯಲ್ಲಿ ಕೈಗೊಂಡ ಕಾರ್ಯದಿಂದಾಗಿ ಅತೀ ಕಡಿಮೆ ಸಾವು ನೋವು ಸಂಭವಿಸಿತು. ಫೈಲಿನ ಚಂಡಮಾರುತ ವಿಪತ್ತು ನಿರ್ವಹಣೆ ವಿಶ್ವದ ಗಮನ ಸೆಳೆಯಿತಲ್ಲದೇ ಸರ್ವರ ಪ್ರಶಂಸೆಗೆ ಪಾತ್ರವಾಯಿತು. 1999ರಲ್ಲಿ ಇಷ್ಟೇ ತೀವ್ರತೆಯ ಚಂಡಮಾರುತ ಒಡಿಶಾದ ಕರಾವಳಿಯನ್ನು ಅಪ್ಪಳಿಸಿದಾಗ 10000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡು ರೂ. 50000 ಕೋಟಿಗೂ ಅಧಿಕ ಹಾನಿಯಾಗಿದ್ದನ್ನು ಇಲ್ಲಿ ಗಮನಿಸಬಹುದು.

ಫೈಲಿನ್ ಪ್ರಭಾವದಿಂದ ಹೆಚ್ಚಿನ ಸಾವು ನೋವು ಸಂಭವಿಸಿಲ್ಲವನ್ನುವುದು ನಿಜವಾದರೂ ಚಂಡಮಾರುತ ಮತ್ತು ತದನಂತರದ ಅತಿವೃಷ್ಟಿಯಿಂದ ಸಂಭವಿಸಿದ ಪ್ರವಾಹದಿಂದಾಗಿ ಅಪಾರವಾದ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಸುಮಾರು ಒಡಿಶಾ ರಾಜ್ಯದ 30 ಜಿಲ್ಲೆಗಳಲ್ಲಿ 17 ಜಿಲ್ಲೆಗಳ ಸುಮಾರು 2ಕೋಟಿಗೂ ಹಚ್ಚು ಜನರು ಪ್ರಭಾಕ್ಕೊಳಗಾಗಿದ್ದಾರೆ. 16400 ಹಳ್ಳಿಗಳು 48 ಪಟ್ಟಣ ಪ್ರದೇಶಗಳಲ್ಲಿ ತೀವ್ರವಾದ ಹಾನಿಯಾಗಿದೆ. 3.3ಲಕ್ಷ ಮನೆಗಳು ನಾಶವಾಗಿವೆ, ಅನೇಕ ಶಾಲೆಗಳು, ಸರ್ಕಾರಿ ಮತ್ತು ಸಾರ್ವಜನಿಕ ಕಟ್ಟಡಗಳು, ಆಸ್ತಿಪಾಸ್ತಿ ನಾಶವಾಗಿವೆ, 6ಲಕ್ಷ ಹೆಕ್ಟೇರಿಗೂ ಅಧಿಕ ಕೃಷಿಭೂಮಿಯ ಫಸಲು ನಾಶವಾಗಿದೆ, 5ಲಕ್ಷ ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ವಿತರಣಾ ವ್ಯವಸ್ಥೆ ತೀವ್ರ ಹದಗೊಂಡಿದೆ, ಬುಡಕಟ್ಟು ಪ್ರದೇಶದ ಅನೇಕ ಗ್ರಾಮಗಳ ರಸ್ತೆ ಸಂಪರ್ಕ ಕಡಿದುಹೋಗಿದೆ. ಪ್ರಾಥಮಿಕ ಅಂದಾಜಿನಂತೆ ರಾಜ್ಯ ವಿದ್ಯುತ್ ನಿಗಮ 900ಕೋಟಿ ರೂಗಳ ನಷ್ಟವನ್ನನುಭವಿಸಿದೆ. ಒಡಿಶಾದ ಗಂಜಾಮ ಜಿಲ್ಲೆಯೊಂದರ ನಷ್ಟವೇ 600ಕೋಟಿ ರೂಗಳಿಗಿಂತಲೂ ಹೆಚ್ಚು. ಒಂದು ಅಂದಾಜಿನಂತೆ ಫೈಲಿನ್ ಚಂಡಮಾರುತ 26ಲಕ್ಷಕ್ಕೂ ಹೆಚ್ಚು ಮರಗಳನ್ನು ಬಲಿ ತೆಗೆದುಕೊಂಡಿದೆ.

ಕೃಷಿಯೇ ಜೀವನಾಧಾರವಾಗಿರುವ ಒಡಿಶಾ ರಾಜ್ಯದಲ್ಲಿ ಚಂಡಮಾರುತದಿಂದಾದ ನಷ್ಟದಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವವರು ಬಡ ಹಾಗೂ ಮಧ್ಯಮ ವರ್ಗದ ರೈತರು, ಸಣ್ಣ ಉದ್ದಿಮೆದಾರರು ಮತ್ತು ಮೀನುಗಾರರು ಅಧಿಕವಾಗಿದ್ದಾರೆ. ರಾಜ್ಯ ಸರ್ಕಾರದ ಅಂದಾಜಿನಂತೇ 2500 ಕೋಟಿ ರೂಗಳಷ್ಟು ಕೃಷಿ ಫಸಲಿನ ನಷ್ಟವಾಗಿದೆ. ಆದರೆ ಅಕ್ಕಿ, ಜೋಳ, ನೆಲಗಡಲೆ, ತರಕಾರಿ ಬೆಳೆಗಳೇ ಹೆಚ್ಚು ಹಾನಿಯಾದದ್ದರಿಂದ ಆಹಾರ ಧಾನ್ಯಗಳ ಕೊರತೆಯ ಸಂಭವವೂ ಇಲ್ಲದಿಲ್ಲ. ಜೊತೆಗೆ ಸೆಣಬು ಬೆಳೆಯುವ ಬಹುಭಾಗ ಪ್ರದೇಶವೂ ಪ್ರಭಾವಕ್ಕೊಳಗಾಗಿದ್ದು ಸೆಣಬು ಆಧಾರಿತ ಉದ್ದಿಮೆಗಳು ಸಂಕಷ್ಟಕ್ಕೆ ಸಿಕ್ಕುವ ಸಂಭವವಿದೆ. ಅತಿವೃಷ್ಟಿಯಿಂದ ನೆರೆಬಂದು ಕೃಷಿಭೂಮಿಯಲ್ಲಿ ಎರಡು ಮೂರು ಅಡಿಯಷ್ಟು ಹೂಳು ತುಂಬಿಕೊಂಡ ಪರಿಣಾಮವಾಗಿ ಬಹುತೇಕ ಹೊಲಗಳಲ್ಲಿ ಮತ್ತೆ ಬೇಸಾಯ ಆರಂಭಿಸಲು ಕನಿಷ್ಟ ಎರಡು ವರ್ಷಗಳ ಶ್ರಮ

ಚಂಡಮಾರುತದ ಮುನ್ಸೂಚನೆಯನ್ನು ಆಧರಿಸಿ ಮುಂಜಾಗ್ರತಾ ಕ್ರಮಗಳನ್ನು ಶ್ಲಾಘನೀಯ ರೀತಿಯಲ್ಲಿ ಕೈಗೊಂಡಂತೇ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನೂ ನಿರ್ವಹಿಸಬೇಕಾದ ಅಗತ್ಯವಿದೆ. ಸೌಭಾಗ್ಯದಿಂದ ಹೆಚ್ಚಿನ ಸಾವು ನೋವು ಸಂಭವಿಸದಿದ್ದರೂ ಸಂತ್ರಸ್ತರು ತಮ್ಮ ಬದುಕನ್ನು ಪುನ: ಕಟ್ಟಿಕೊಳ್ಳಲು ಎದುರಿಸುತ್ತಿರುವ ಸಂಕಷ್ಟಗಳನ್ನು ಮನಗಂಡು, ಅದರಲ್ಲೂ ಬಡ ಮತ್ತು ಮಧ್ಯಮ ಕೃಷಿಕರು ಮತ್ತು ಮಿನುಗಾರರ ಅಗತ್ಯಗಳನ್ನು ಸರಿಯಾಗಿ ಅಂದಾಜಿಸ ನೆರವಿಗೆ ಧಾವಿಸಬೇಕಾದ ಆವಶ್ಯಕತೆಯಿದೆ.
ಪಡಬೇಕಿದೆ. ರೈತರ ಕೃಷಿ ಸಲಕರಣೆಗಳು, ಜಾನುವಾರುಗಳು, ಸಂಗ್ರಹಿಸಿಟ್ಟ ಬೀಜ, ಗೊಬ್ಬರ ಇತ್ಯಾದಿಗಳ ಲೆಕ್ಕ ಅಂದಾಜಿಗೆ ನಿಲುಕದ್ದು. ಅದರಂತೇ ದೋಣಿಗಳು ಬಲೆಗಳು ಮುಂತಾದ ತಮ್ಮ ಕಸುಬಿನ ಸಲಕರಣೆಗಲನ್ನು ಕಳೆದುಕೊಂಡ ಮೀನುಗಾರರೂ ಹೇಳಿತೀರದ ಬವಣೆಯನ್ನು ಅನುಭವಿಸುತ್ತಿದ್ದಾರೆ.

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...